Tuesday, April 26, 2016

ಸಂಗ ದೋಷ

ಜಗವೇ ನಶ್ವರ ಕಪಟ ಮೋಸವಂತೆ,
ಎಲ್ಲೆಲ್ಲೂ ಬರೀ ದುರ್ಜನರ ಸಹವಾಸ,
ನಮ್ಮ ಮೇಘರಾಜನದೂ ಅದೇ ಕಥೆ...
ನೀರಾ ಕುಡುಕ ರವಿಯ ಸೇರಿ
ದಾಸನಾಗಿ ಬಿಟ್ಟನ...
ಮನೆ ಮಾನ ತೆಗೆದನ...
ಇವನಿಗೆ ಹೇಳುವವರಿಲ್ಲ,
ಚಂದ್ರ ರಾತ್ರಿ ಸಂಚಾರಿ,
ಪರ್ವತರಾಜ ಮುದುಕನಾದ,
ವಾಯುವಿಗೆ ನಿಶ್ಯಕ್ತಿ...
ಪ್ರಕೃತಿಯ ಮಾತನ್ನು ಕೇಳಲ್ಲ
ಹಾಗೂ ಹೀಗೂ ಧರಿತ್ರಿ ಬೀದಿಗೆ ಬಂದಳು...!!!
ಭೂಮಿ ಕುಡುಕನ ಮನೆವಾಯಿತು.

Saturday, April 23, 2016

ಪ್ರೀತಿ

ಭೂಮಿಕಳನ್ನು,
ಕಾಯಿಸಿ,
ಗೋಗರಿಸಿ,
ತೊರೆದು,
ನಡುಗಿಸಿ,
ಗುಡುಗಿ,
ಆರ್ಭಟಿಸಿ,
ಆಲಾಪಿಸಿ,
ಪ್ರಲಾಪಿಸಿ,
ಮೌನವಾಗಿ,
ಹನಿಹನಿಯಾಗಿ,
ಧಾರೆಯಾಗಿ,
ಮುನಿದೋ,
ಒಲಿದೋ,
ಮುದ್ದಿಸಿ,
ಮೀಯಿಸುತ್ತಾನೆ
ಈ ಮೇಘರಾಜ....!!

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...