Wednesday, October 18, 2017

ಒಂದು ತೊಟ್ಟೆಯ ಕತೆ

ನನ್ನ ಮಾವ ತಮ್ಮ ಜಾಗದ  ವಲಚ್ಚಿಲ್  ಒಳಗೆ ಮರ ಗೆಣಸುಗಳನ್ನು ತಿಂದು ಮುಗಿಸುತಿದ್ದ ಹೆಗ್ಗಣಗಳನ್ನೂ ಹಿಡಿಯಲು ಅಲಲ್ಲಿ ಅಡೆಂಚಿಲ್  ಇಡುತ್ತಿದ್ದರುಅದಕ್ಕಾಗಿ ಅಕ್ಕಿಯೋಗೋಧಿಯ ಕಾಳುಗಳನ್ನೋ ಪುಟ್ಟ ಚಿಪ್ಪಿಯಲಿಟ್ಟು  ತೊಟ್ಟೆಯಲ್ಲಿ ಕಟ್ಟಿ ಜೋಪಾನ ಮಾಡುತಿದ್ದರು . ಯಾಕೆಂದರೆ ಮುಂಜಾವಿನ ಮಂಜಿನ ಹನಿಗಳಿಗೆ ಗೋಧಿ ನಾನಿಬಿಸಾಡುವುದು ಬೇಡವೆಂದುತರಕಾರಿ ಬೆಳೆಸಿದ ಮಜಲಿನಲ್ಲಿ  ತರಕಾರಿ  ನಿನೆಗಳನ್ನು  ತಿನ್ನಲು ಬರುತಿದ್ದ ಹಕ್ಕಿಗಳ ಉಪಟಳ ತಡೆಯಲು ಮಾವ  ಮುಡ್ಕನೆ ಇಟ್ಟು   ಮುಡ್ಕನೆಗೆ ಕಟ್ಟುವ  ಪಕ್ಕಿಕೇನೆ ಹಣ್ಣಿನ  ಅರ್ಧದವರೆಗೆ ಮಾತ್ರ  ಲಕೋಟೆ ಕಟ್ಟುತ್ತಿದ್ದರುಎಲ್ಲ ಕೇನೆಯನ್ನು ಒಂದೇ ಹಕ್ಕಿ ತಿಂದು ತೇಗುವುದು ಬೇಡವೆಂದು ಮಾವನು ಕುರೆ ಕಟ್ಟಿ ಉಳಿಸುವುದುಮತ್ತೆ  ಹಕ್ಕಿಗಳಹಿಂಡುಗಳನ್ನು ಹೆದರಿಸಲು ಅಲ್ಲಲ್ಲಿ ಬೆದರು ಬೊಂಬೆಯ ಬದಲಾಗಿ ಮಿಂಕೋಟೆ ತೊಟ್ಟೆಗಳನ್ನುಬೆದರು ತೊಟ್ಟೆಗಳನ್ನು ತೂಗು ಹಾಕುತಿದ್ದರುಇನ್ನು ಹಲಸಿನ ಸೀಸನ್ನಲ್ಲಿ ಹಪ್ಪಳ ಒತ್ತಲು ಗೋಲಾಕಾರದ ಪಾರದರ್ಶಕ   ತೊಟ್ಟೆಯನ್ನೇ ಬಳಸುವುದು,  ಇದೆಲ್ಲ ನಮ್ಮ ಮಾವನ ತೊಟ್ಟೆ ಕತೆ
ಮತ್ತೆ ನಮ್ಮ ಹಳೆ ಟೇಪ್ ರೆಕಾರ್ಡ್ನನ ಕ್ಯಾಸೆಟಿನ  ರೀಲ್,  ರೀಲಿನ ಎರಡು ಕಡೆ ಕಲ್ಲುಗಳನ್ನೂ ಕಟ್ಟಿ ರೊಯ್ಯೆಂದು ಮೇಲೆ ಎಸೆದು ಎರಡು ಮರಗಳಿಗೆ ಸಂದು ಹಾಕುವಂತೆ ಮಾಡಿಅದುಮುಸ್ಸಂಜೆಯ ಬಾಡಿದ ಬೆಳಕಿಗೆ  ಮಿನುಗುವ ಚಂದ ನೋಡುವುದುವೇಗವಾಗಿ ಬೀಸುವ ಗಾಳಿಗೆ  ರೀಲ್  ಸುಯ್ಯೇ ಸುಯ್ಯಿ ಎಂದು ಬುಸುಗುಟ್ಟುವ ಹಾವಿನ ಶಬ್ದಉಂಟಾದಾಗ ಅಮ್ಮನಿಂದ ಬೈಗುಳ ಕೇಳಿಸುವುದು.  ಕಾಗದ ಉರುಂಡೆ ಮಾಡಿಸಣ್ಣ ಉರುಂಟು ಕಲ್ಲುನ್ನು ತುಂಬಿ ಹೊರಗೆ ಲಕೋಟೆ ಕಟ್ಟಿಚೆಂಡಟಾ ಆಡಿದ್ದು  ಇದು ಮೊದ ಮೊದಲುತೊಟ್ಟೆ ಬಳಸಿ  ಆಡಿದ ಆಟಗಳುಇವು ನಾನು  ಮೊದಲು ಕಂಡ ತೊಟ್ಟೆಯ ವಿಷ್ಯ ಹಾಗೂ ತೊಟ್ಟೆಯ ಆಟಗಳು ... ಇನ್ನೂ ಇತ್ತೀಚಿನ ವರೆಗೆ ಮದುವೆಗಳಲ್ಲಿ ಮಿಂಕೋಟೆ ಲಕೋಟೆಗಳ  ಅಲಂಕಾರ ಮಾಡುತ್ತಿದ್ದರೆದಿಕ್ಕೆಲಿನ ಮೂಲೆಯಲ್ಲಿ ಅಡಿಕೆ ಹಾಲೆಯ ಮೂಡೆಯಲ್ಲಿ   ಕಟ್ಟಿಡುತಿದ್ದ ಲುಂಗೆಲ್  ಮೀನನ್ನು ಕಾಗದದಲ್ಲಿ ಕಟ್ಟಿ ಲಕೋಟೆಯಲ್ಲೇ ಕಟ್ಟುತ್ತಿದದ್ದು ನನ್ನಮ್ಮ , ನಮ್ಮಚಿಕ್ಕಪ್ಪ ತೋಡಿನ ಏಡಿ ಹಿಡಿಯಲು ಮನೆಗೆ ತಂದ ಮೀನಿನ ಪೊಟ್ಟೆಯನ್ನು ತೊಟ್ಟೆಯಲ್ಲಿ ಕಟ್ಟಿ ತೋಡಿನ ಸವಾಕಾಶ ಜಾಗದಲ್ಲಿ ಅಲ್ಲಲ್ಲಿ ಒಂದು ಸದಾ ಗಾತ್ರದ ಕಲ್ಲುಗಳ ಕೆಳಗಿಟ್ಟು ಒಂದೆರಡುಗಂಟೆಗಳ ನಂತ್ರ ಡೆಂಜಿ ಬೋಂಟೆಗೆ ಹೋಗುವುದು ಆಗಾಗ ನಡೆಯುತ್ತದೆ

ಮತ್ತೆ ಆಗಿಂದಾಗ್ಗೆ  ತೊಟ್ಟೆ ಎಂದ ಕೂಡಲೇ ನೆಂಪಾಗುವುದು  ತೊಟ್ಟೆ ಸಾರಾಯಿ.  ಇದನ್ನು ಕರಾವಳಿಯಲ್ಲಿ ತೊಟ್ಟೆ ಅಂತಲೇ ನಾಮ ವಿಶೇಷಣದಿಂದ ಹೆಸರಿಸಲಾಗಿತ್ತು.  ನಮ್ಮ ಅಜ್ಜ ಬೇಗನೆ ಗೊಟಕ್  ಅಂದದ್ದು  ತೊಟ್ಟೆಯ ಹಠಾತ್  ಮುಷ್ಕರದ ಬಂದ್ ನಿಂದಾಗಿ ಎಂಬುದು ಸತ್ಯಹೌದು ಸುಮಾರು ೮೫ ವರ್ಷದ ನನ್ನಜ್ಜ ಸೂರ್ಯನ ಬೆಳಕನ್ನೇ ಗಂಟೆ ಮಾಡಿ ಸಂಜೆ೫ ಆಗುವಾಗ ಗಡಂಗಿನ ಎದುರು ದಿನದ ಹಾಜರಿ  ಹಾಕುತ್ತಿದ್ದರುಯಾವಾಗಲು ಬಾಗಿ ನಡೆಯುತ್ತಿದ್ದ ನಮ್ಮಜ್ಜನೊಳಗೆ   ತೊಟ್ಟೆ  ಸೇರಿದರೆ ಸರಿ ಸುಮಾರು  ಸರ್ತವಾಗಿಯೇ ಕೈ ಹಿಂದೆಕಟ್ಟಿಕೊಂಡು  ನಡೆಯುತ್ತಿದ್ದರುಹೀಗೆ ನನ್ನಜ್ಜನಂತೆ ನನ್ನೂರ ಹಲವು ತೊಟ್ಟೆ ಪ್ರಿಯರು ಬಾರದ ಊರಿಗೆ ಕಳೆದು ಹೋಗಿದ್ದಾರೆ

ತಮಗೂ ಗೊತ್ತಿರಬಹುದು ಪ್ಲಾಸ್ಟಿಕ್ ಸುಟ್ಟರೆ ಅದರಿಂದಾಗಿ ಹಲವು  ಅನಿಲಗಳು  ಉತ್ಪತ್ತಿಯಾಗುತ್ತವೆ ಎಂದುನಮ್ಮ ಸಮಾರಂಭಗಳಲ್ಲಿ ಅಡುಗೆ ಭಟ್ರು ಪಪ್ಪಡ ಕಾಯಿಸಿ ಅದರ ಹೊರಕವಚ ಪ್ಲಾಸ್ಟಿಕ್ ತೊಟ್ಟೆಯನ್ನು ಒಲೆಗೆ ಹಾಕು
ತ್ತಾರಲ್ವಾಇಲ್ಲಿ ಪಪ್ಪಡಕ್ಕೆ ಹಾಕಿದ ಉಪ್ಪಿನಂಶ (Chlorine Compoundಪ್ಲಾಸ್ಟಿಕ್ ನೊಂದಿಗೆ ವರ್ತಿಸಿ ಅಡುಗೆಮನೆಯಲ್ಲೇ ಡಯಾಕ್ಸಿನ್  ಅನಿಲ ತಯಾರಾಗುತ್ತದೆ.   ಅನಿಲವನ್ನು ಅಮೇರಿಕ ಸೋತು ಹೋದ  ಏಕೈಕ  ಯುದ್ಧ  ವಿಯೆಟ್ನಾಂ ಯುದ್ಧ  1961 - 1971ರಲ್ಲಿ ಬಳಸಿತ್ತು.  ಇದರಿಂದಾಗಿ ನೂರಾರು ಎಕರೆ ಸಸ್ಯಜನ್ಯ ನಾಶವಾಗಿತ್ತು.  ಬಗೆಬಗೆಯ ಕಾಯಿಲೆಗಳಿಗೆ ನಾಂದಿಯಾಗಿತ್ತಂತೆ.  ಆವಾಗಿನ ಕಾಲದಲ್ಲೇ ವಿಷ ಅನಿಲವಾಗಿವಾಗಿ ಬಳಸಿದ್ದರುಇದೇ ಅನಿಲ ನಾವು ತೋಟಕ್ಕೆ ನೀರು ಸರಬರಾಜಿಗೆಬಳಸುವ PVC ಕೊಳವೆಗಳನ್ನು ಉರಿಸಿದ್ರು ಉತ್ಪತ್ತಿಯಾಗುತ್ತದೆ.  ಮತ್ತೆ ತಾವು ನೋಡಿರಬಹುದು ಜಾತ್ರೆಯಂದು ಬಿಡುವ ಕದಿನಅಲ್ಲಿ ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವಪಟಾಕಿಗಳಲ್ಲಿ ಬಳಸುವ ನೀಲಿಗಾಗಿ ತಾಮ್ರಹಸಿರಿಗಾಗಿ ಬೇರಿಯಂಕೆಂಪಿಗಾಗಿ ಕ್ರೋಮಿಯಂ ಬಳಸುತ್ತಾರೆ.  ನಾವು ದಿನ ಬಳಸುವ ತೆಳು ತೊಟ್ಟೆಅದರಲ್ಲಿ ತರುವ ಮೊಸರುತಿಂಡಿಸಾಂಬಾರುತರಕಾರಿಗಳ ಮೂಲಕ ದೇಹವನ್ನು ಸುಲಭವಾಗಿ ಸೇರಿಕೊಳ್ಳುತ್ತದೆಇವೆಲ್ಲದುದರಿಂದಾಗಿ   ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಭಾಗವಾಗಿರುವುದು ಆಮಿಷವಂತೂ ಅಲ್ಲಅದು ವಿಷವೇ



ಆದುದರಿಂದ ಕಳಕಳಿ ಇಷ್ಟೇ "ಪ್ರಕೃತಿ ಮಾತೆಯು  ನಮ್ಮ ಮಾರ್ಗದರ್ಶಕಿನಮ್ಮ ಶುಶ್ರೂಷೆ ಮಾಡುವ ದಾದಿ ಹಾಗೂ ನಮ್ಮ ಸೃಷ್ಟಿಗೂ ಕಾರಣಳುಎಂಬ ಆಂಗ್ಲ ಕವಿ ವರ್ಡ್ಸವರ್ತನ  ಮಾತನ್ನು ಅನುಮೋದಿಸಿವಿಷ್ಣು ಪತ್ನಿ ಎಂದು ಆರಾಧಿಸುವ ಭೂಮಿ ತಾಯಿಗೆಶುದ್ಧ ಆಮ್ಲಜನಕ ನೀಡುವ ಪರಿಸರಕ್ಕೆ ಪ್ಲಾಸ್ಟಿಕಿನ ಕೊಡುಗೆಯನ್ನು ಕಮ್ಮಿ ಮಾಡೋಣ.  ಬದಲಾಗಿ ಅಪ್ಪನ ಜೋಂಬ್ಲಸ್ ಪ್ಯಾಂಟಿನ ಕಾಲು ಕತ್ತರಿಸಿ ಒಂದು ಕಡೆ ಹೊಲಿದು ಮಗದೊಂದು ಕಡೆ ಲಾಡಿ ಸಿಕ್ಕಿಸಿದರೆ ನಮ್ಮ ಕೈಚೀಲ ಸಿದ್ಧವಾಗುತ್ತದೆ.  ಸ್ವಲ್ಪ ಅಂತರ್ಮುಖಿಗಳಾಗಿಜಿಜ್ಞಾಸೆ ಮಾಡಿ ತೊಟ್ಟೆಗೆ ವಿದಾಯ ಹೇಳೋಣಸಂಗೀಸುಬಟ್ಟೆ ಚೀಲಗಳನ್ನು ಬಳಸೋಣನಾವು ತೊಟ್ಟೆಗಳ ದಾಸರಾಗದಿರೋಣ ಏನಂತೀರಿ... !!!!
x


1 comment:

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...