Thursday, February 12, 2015

ಇಬ್ಬನಿ


1.ಸತ್ಯ‬ .
oooo
ಹೂವು ಹೆಣ್ಣಾದರೆ ತಾನೇ 
ಹಣ್ಣಾಗುವುದು.. 
ಗಂಡು 
ಮುಟ್ಟದೇ
ಹೆಣ್ಣು ಕೊಡುವುದೇ
ಜಗಕೆ ಕಣ್ಣು...!!!!


2.ಅಮಾವಾಸ್ಯೆ.
೦೦೦೦೦೦೦
ಚಂದ್ರಿಕಾ 
ಮುಟ್ಟಾದೆನೆಂದು 
ಬಾನುಮನೆಯ
ಬಿಟ್ಟು
ಹಿತ್ತಿಲ
ಮನೆಯಲ್ಲಿ
ಮಲಗಿದ್ದಾಳೆ
ಚುಕ್ಕಿ
ಮಕ್ಕಳ
ತೊರೆದು...!!


3.ಗುಡುಗು - ಮಳೆ
೦೦೦೦೦೦೦೦೦
ಮೇಘ,
ಇನಿಯನೊಂದಿಗೆ 
ಪರ್ವತ ಸುತ್ತಿ,
ಹಿಮಕೆನೆ ತಿಂದು,
ತಂಪು ಗಾಳಿ ಸೋಕಿ
ಕೆಮ್ಮು
ಶೀತ..!!!


4.ಮುಸ್ಸಂಜೆ
೦೦೦೦೦
ಬೆಸ್ತನ 
ಬಲೆಗೆ
ಸಿಲುಕಿದ
ರವಿ
ಬಿಡಿಸಿಕೊಳ್ಳಲು
ವಿಲ ವಿಲ
ಒದ್ದಾಡುತ್ತಿದ್ದಾನೆ
ಸಾಗರ ತುಂಬಾ
ರಕ್ತದೋಕುಳಿಯ
ಚೆಲ್ಲಿ.



5.ಅರುಣೋದಯ.
೦೦೦೦೦೦೦೦
ಚಂದ್ರನ
ಪಿರಿಪಿರಿ
ಬೆಳಕ ಮಳೆಗೆ
ಅರಳಿದ
ಚುಕ್ಕಿ
ಅಣಬೆಗಳನ್ನು
ಮಧ್ಯಾನ್ನ ದ ಭೋಜನದ
ಸಿದ್ಧತೆಗಾಗಿ
ಮುಂಜಾನೆಯೇ
ಕೀಳುತ್ತಿದ್ದಾನೆ
ರವಿ ಮಾಮ... 

6.ಮಣ್ಣಿನ ಪರಿಮಳ.
೦೦೦೦೦೦೦೦೦೦
ಮಾಂಸಲದೊಳಗೂ
ಮಾಂಸದೊಳಗೂ
ಮದಿರೆಯೊಳಗೂ
ಮಾಂಫಲದೊಳಗೂ
ಮಾಳಿಗೆಯೊಳಗೂ
ಮಾನಸದೊಳಗೂ
ಇರುವುದೊಂದೇ
ರುಚಿ ಪರಿಮಳ
.
.
.
.
.
ಮಣ್ಣಿನದು...

7.ಮಳೆ
೦೦೦೦೦೦೦
ವರ್ಷಾಳಿಗೆ
ಜೂನ್ ತಿಂಗಳು
ಬೇನೆಯಿಲ್ಲದ 
ಪ್ರಸವಕ್ಕೆ
ದಿನಾಂಕ
ಕೊಟ್ಟಿದ್ದಾರೆ
ಪ್ರಕೃತಿ
ವೈದ್ಯರು...!!

8. ಬಡವನಾಗಬೇಕು
೦೦೦೦೦೦೦೦೦೦೦
ನಾನು ಬಡವನಾಗಬೇಕು
ಅಹಂಕಾರದಲ್ಲಿ 
ಜೀವನದ ಜೀನದಲ್ಲಿ... 
ರೋಗ ಮೂಸುವುದಿಲ್ಲ 
ಚಿಂತೆ ಕಾಡಲ್ಲ 
ಯಾರು ಬೇಡುವುದೂ ಇಲ್ಲ...
ಗೆಳೆಯರು ಕಮ್ಮಿ
ದುಡ್ಡು ಕಡಿಮೆ
ಅದರೂ
ಉಂಡ ಅಗುಳು ಮೈಗೂ
ಹಿಡಿಸುತದೆ
ಪುಷ್ಟಿ ಕೊಡುತದೆ...
ಭಗವಂತನ
ಬಲವೂ
ಇದೆ
ಅನಿಸುತದೆ... !!!!


9. ಮಣ್ಣಿನ ಪರಿಮಳ 
೦೦೦೦೦೦೦೦೦
ಮೇಘ - ಮೇಧಿನಿಯ 
ಪ್ರಥಮ ಮಿಲನಕ್ಕೆ  
ಸಿದ್ಧತೆ 
ಭೂಕೋಣೆ ತುಂಬಾ 
ಸುಗಂಧ 
ಪೂಸಿದ್ದಾರೆ. 

1 comment:

  1. ಖುಷಿಯಾದದ್ದೇನೆಂದರೆ, ನಾಲ್ಕನೇ ಇಬ್ಬನಿಯ ಹೂರಣದಂತೆಯೇ ಇರುವ ಚಿತ್ರವೊಂದು ಈಗ ತಾನೇ ನೋಡಿದೆ.
    ಎಲ್ಲ ಹನಿಗಳಿಗೂ ಸೇರಿ ಒಟ್ಟಿಗೇ ಸಲಾಮುಗಳು.

    ReplyDelete

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...