Wednesday, November 6, 2019

ತುಳು ಪದ ವಿಶೇಷ


ಭಾಷೆ ಎಂಬುದು ಒಂದು ವಿಸ್ಮಯ. ನಾಗರಿಕ ಮಾನವನ ಮಹಾ ಅನ್ವೇಷಣೆಯಲ್ಲಿ ಇದೂ ಒಂದು. ಉಸಿರೆಂಬ ಶಬ್ದಗಾಳಿಯ ನಡುವೆ ಸಿಲುಕಿ ನಿರಂತರ ಕಂಪನವಾಗಿ, ಕಂಪನವು ಒತ್ತಡ, ಬಲ ಪ್ರಯೋಗ ಹಾಗೂ ಕಣಗಳ ಸ್ಥಾನ ಪಲ್ಲಟದಿಂದ ಉಂಟಾಗಿ, ಕಂಪನವು ಅಲೆಗಳ ರೂಪವಾಗಿ ಮಾತು ಅರಳು ಹುರಿದಂತೆ ಅರಳುತ್ತದೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆಯಂತೆ. ಅವುಗಳಲ್ಲಿ ತುಳುವಿಗೂ  ವಿಶಿಷ್ಟ ಸ್ಥಾನವಿದೆ. 2000 ವರ್ಷಗಳಿಂದ ಜನ ಭಾಷೆಯಾಗಿದ್ದು, ಇಂದಿಗೂ  ಜೀವಂತವಾಗಿರುವ ನುಡಿ ಇದು. ಇಂತಹ ಅನನ್ಯತೆ ಇರುವುದು ಕೆಲವೇ ಭಾಷೆಗಳಿಗೆ ಮಾತ್ರ. ಅಸಂಖ್ಯಾತ ಜನ ತುಳುವನ್ನು ಬಳಸುತ್ತಾ  ಬಳಸುತ್ತಾ ನುಡಿಯಲ್ಲಿನ ಶಬ್ದಗಳಿಗೂ ಅವುಗಳ ಆಳದ ಅರ್ಥಗಳಿಗೂ ಅನನ್ಯ ಸಂಬಂಧ ಉಂಟಾಗಿದೆ. ಮಾತಿಗೂ ಅರ್ಥಕ್ಕೂ ಇರುವ ನಂಟನ್ನು ಕಾಳಿದಾಸ ಶಿವ ಪಾರ್ವತಿಯರಿಗೆ ಹೋಲಿಸಿದ್ದಾನೆ. ಆದರೆ ಶಬ್ದ ಅರ್ಥಗಳಲ್ಲಿ ಮೂಲಭೂತವಾದ ನಂಟೇನು ಇಲ್ಲ ಎನ್ನಬಹುದೇನೋ! ಹೆಚ್ಚಿನವು ರೂಪ, ಗುಣ, ಲಕ್ಷಣ ಮತ್ತು ರೂಢಿಯಿಂದ ಬಂದವಷ್ಟೇ.

ಒಂದು ಭಾಷೆಯ ಮೂಲಕ ಆಲೋಚನೆ ರೂಪು ತಾಳಿ ಮೊಟ್ಟೆಯಾಗಿ ಕಾವು ಕೊಟ್ಟು ಒಡೆದು ಮರಿಯಾಯಿತೆಂದರೆ ಅಲ್ಲಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆದುದರಿಂದ ಭಾಷೆಯ ಹದವನ್ನು ತಿಳಿದು ಮಾತನಾಡುವುದನ್ನು ಇತರರು ಹೇಳಿದ್ದನ್ನು ಸರಿಯಾಗಿ  ಅರ್ಥ ಮಾಡಿಕೊಂಡು ಯೋಚಿಸುವವರಾಗಬೇಕಾಗುತ್ತದೆ. ಅದಕ್ಕಾಗಿ ಮಾತು ಮತ್ತು ಅರ್ಥ ಇವೆರಡರ ಸಂಬಂಧವನ್ನು ಅರಿತಾಗ ಮಾತ್ರ ಮಾತಿನ ಹದವಾದ ಎರಕ ಉಂಟಾಗುತ್ತದೆ. ಮಾತಿನ ಹೊರಮೈ ಅದರಲ್ಲಿ ಅರ್ಥ ಬಂದು ಸೇರುವ ಬಗ್ಗೆ, ಅದರ ಉಚ್ಚಾರ, ಶಬ್ದ ಒಡೆದು ನೋಡುವ ಪರಿ ಹೀಗೆ ಇವುಗಳ ಒಳಮರ್ಮವನ್ನು ತಿಳಿದರೆ ಭಾಷೆಯ ಬಗೆಗಿನ ಹಿಡಿತ ಕೈಗೂಡೀತು. ಇದು ಅಭ್ಯಾಸದಿಂದ. ಓದುವುದರಿಂದ ಹಾಗು ಬಳಸುವುದರಿಂದ  ಸಾಧ್ಯವಾಗುವುದು. 2000 ವರ್ಷಗಳಲ್ಲಿ ಅಸಂಖ್ಯಾತ ತುಳುವರುಸರವುಡು ಸರವುಮಲ್ಲೆಎಂದು ಮಾತನಾಡುವ, ಕೇಳಿಸಿಕೊಳ್ಳುವ ಭಾಷೆಯಾದ ತುಳುವನ್ನು ನಿರಂತರವಾಗಿ ಹರಿಯುವ ನದಿಯಂತೆ ಪದಕಟ್ಟುತ್ತಾ, ಪದ ಒಡೆಯುತ್ತಾ , ಅನ್ಯಭಾಷೆಯ ಪದಗಳ ಜೊತೆ ನೆಂಟಸ್ತಿಕೆ ಮಾಡುತ್ತಾ ಬಂದಿದ್ದಾರೆ. ಹರಿವಿನಲ್ಲಿ ಹಲವು ಶಬ್ದಗಳು ಹಿಂದಿನಂತೆ ಉಳಿದು ಬಂದಿದೆ. ಕೆಲವು ಮಾರ್ಪಾಡು ಮತ್ತೆ ಕೆಲವು ಮರೆಯಾಗಿ ಮರಳಲ್ಲಿ ನೆರಳಾಗಿ ಇಂಗಿಹೋಗಿವೆ. ಅದೆಷ್ಟೋ ಪದಗಳು ಹೊಸದಾಗಿ ಬಂದು ಬಂಧುರಾಗಿ ಸೇರಿಕೊಂಡಿವೆ. ಹೀಗೆ ಶಬ್ದಗಳ ನದಿಹರಿಯುತಿದೆ. "ಶಬ್ದ ಪಾರಂ ಆರ್ಗಂ ಅಶಕ್ಯಂ" ಎಂಬ ಮಾತಿದ್ದರೂ, ನಾವು ಬಳಸುವ ಶಬ್ದಗಳ ಸ್ವರೂಪ ಅಂದರೆ ಅವುಗಳ ಹುಟ್ಟು ಬೆಳವಣಿಗೆಯನ್ನು ಕೆದಕುವ ಹಾಗೂ ಶಬ್ದಗಳ ದಾಂಪತ್ಯದ ಮರ್ಮವನ್ನು ಕೆದಕುವ ಅದರ ಫಲವನ್ನು ಕುಡಿಗಳಲ್ಲಿ ಹುಡುಕುವ ಮೂಲಕ ಪದಗಳ ಹದವನ್ನು ಹರಿವನ್ನು ಹುಡುಕುವ ಚಿಕ್ಕ ಪ್ರಯತ್ನವಿದು.

ಆದಿವಾಸಿ ಸಂಸ್ಕೃತಿಯನ್ನು ಒಳಗೊಂಡ ತುಳುನಾಡಿನ ಸಂಸ್ಕೃತಿಯು ಕೃಷಿಯನ್ನು ಒಳಗೊಂಡ, ಮುಖ್ಯವಾಗಿ ಭತ್ತದ ಕೃಷಿ. ಭತ್ತದ ಕೃಷಿ ಸಾಹಿತ್ಯದಲ್ಲಿ ಕಂಡು ಬರುವ ಪಾಡ್ದನ, ಸಂಧಿ, ಉರಲ್, ಕವಿತೆ ಇದರಲ್ಲಿ ಬರುವ ಬಿತ್ತು, ಬೆನ್ನಿ, ಬಾರ್, ಬೇಸಾಯ, ಬುಲೆ , ಬೇಲೆ, ಬೇಂಕೆ, ಬೇನೆ, ಬೆಗರ್, ಬಿದೆ , ಬಯಿ, ಭತ್ತದ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಈಗ ಒಂದೊಂದೇ ತುಳು ಶಬ್ದಗಳನ್ನು ನೋಡುವುದಾದರೆ, ಸಂಸ್ಕೃತದಲ್ಲಿ ಬೀಜವಾದರೆ ದ್ರಾವಿಡದಲ್ಲಿ ಅದು ಕುರು ತುಳುವಿನಲ್ಲಿ ಬಿತ್ತು ಎಂದಾಗುತ್ತದೆ. ಮೊಳಕೆಗೆ ಬಂದ ಬೀಜಗಳಿಗೆ ಪೊಜಿಲು ಬಿತ್ತು, ಮೊಳಕೆ ಬರದ ಬೀಜಗಳಿಗೆ ಪೊಡಿ ಬಿತ್ತು ಎಂದಾಗುತ್ತದೆ. ಪುಂಡಿ ಬಿತ್ತು, ಕೈಬಿತ್ತು, ಕಿಂಕಿಣಿ ಬಿತ್ತು, ಪೊಟ್ಟು ಬಿತ್ತು ಎಂಬೆಲ್ಲ ಬೇರೆ ಬೇರೆ ಸಂದರ್ಭಗಳ ಪ್ರಯೋಗದಲ್ಲಿದೆ. ಜೊತೆಗೆ ಬಿತ್ತು ಪಾಡುನ, ಬಿತ್ತು ನರ್ಗಾಪುನ, ಬಿತ್ತುನವು, ಬಿತ್ತ್ ತಾರಾಯಿಬಿತ್ತ್ ಮುಡಿ, ಬಿತ್ತ್ ಬೋರಿ ಇವು ಜೀವ ಜೀವಕ್ಕೆ ಸಾಕ್ಷಿಯಾದವುಗಳ ವಂಶ ವಂಶದ ಕುಡಿ ಎಂಬ ಅರ್ಥವನ್ನು ಕೊಡುತ್ತದೆ. ಇನ್ನು ದ್ರಾವಿಡ ಭಾಷೆಯ ಕುರುವಿನ ಕಡೆ ಹೋದರೆ ಮಲಯಾಲಂನಲ್ಲಿ ಚಕ್ಕ ಕುರು ಅಂದರೆ ಹಲಸಿನ ಬೀಜ ತುಳುವಿನಲ್ಲಿ ಪೆಲತ್ತರಿ. ಅದಕ್ಕೆ ಸಂವಾದಿಯಾಗಿ ಅರಿ, ಜೂವೊತ್ತರಿ, ನಿಲುತ್ತರಿ ಪುತ್ತರಿ (ಪೊಸ ಅರಿ), ಹುತ್ತರಿ , ಸಾಮೆತರಿ ಎಂಬ ಪದಗಳು ಬಳಕೆಯಲ್ಲಿವೆ ಇವೆಲ್ಲ ಹುಟ್ಟು, ಸಮೃದ್ಧ, ಫಲವಂತಿಕೆ, ಜೀವನದ ಬಗೆಗಾಗಿವೆಇವು ಕೊಡವ, ತಮಿಳಿನಲ್ಲಿಯೂ ಬಳಕೆಯಲ್ಲಿವೆ. ಆದರೆ ಕನ್ನಡದ ಅಕ್ಕಿ, ಅರಬ್ಬಿಯ ಆಲ್ರುಸ್ ಗಳಿಗೆ ಸಂಬಂಧ ಕಲ್ಪಿಸುವುದು ಕಷ್ಟ ಸಾಧ್ಯ.

ಕುರುವನ್ನು ಆದಿಯಾಗಿರಿಸಿ, ತುಳುವಿನಲ್ಲಿ ಕುರುಂಟು ಎಂಬ ಪದವಿದೆ. ಇದು ದೈವಾರಾಧನೆಯ ಸಂಧರ್ಭದಲ್ಲಿ ದೈವಕ್ಕೆ ಕೊಡುವ ಒಂದು ಗಂಟಿನ ಕೈ ಕಾಣಿಕೆ. ಇದರಲ್ಲಿ ಅಕ್ಕಿ ಅಥವಾ ಬತ್ತವನ್ನು ತುಂಬಿಸಿ ಬೈಹುಲ್ಲಿನಲ್ಲಿ ಕಟ್ಟಿ ಅದಕ್ಕೊಂದು ಕೈ ಮಾಡಿ ಕೊಡುವುದು. ಇದು ಸಾಂಸ್ಕೃತಿಕ ನೆಲೆಯ ಶಬ್ದ ಎಂಬ ಜಿಜ್ಞಾಸೆ ಇದ್ದರೂ ಕುರು ಆದಿ ಪ್ರಯೋಗವಾಗಿದೆ. ಒಟ್ಟಾರೆ ಉರುಂಟು, ಕುರುಂಟು, ಮುರುಂಟು, ಸುರುಂಟು ಶಬ್ದಗಳೆಲ್ಲ ಬಾಯಿಯನ್ನು ಸುರುಂಟಿ ಸುತ್ತಿಕೊಂಡು ಅಥವಾ '' ಎನ್ನುವಂತೆ ಮಾಡುತ್ತದೆ. ಇದೇ ಕುರುಂಟು ಕೊಳಕೆ ಗದ್ದೆಯಲ್ಲಿ ಬೀಜ ಬಿತ್ತುವ ಮೊದಲು ನೀರು ಸರಿಯಾಗಿ ಹರಿದು ಹೋಗಲು ಚಿಕ್ಕ ಕಾಲುವೆಗಳನ್ನು ಮಾಡಲು ಉಪಯೋಗಿಸುವ ಸ್ವಲ್ಪ ದಿನ್ನ ಇರುವ ಗುಂಡಗಿನ ಕಲ್ಲು ಹೌದು. "ಅರಿಬೈಲ್ತ ಪೂಕರೆ ಕಂಡೊಟ್ ಸಂಕಪಾಲೆ ಕುರುಂಟು ಒಯಿಪುವೆ" ಎಂಬ ನಂಬಿಕೆಯಿದೆ. ಕುರುಂಟುವಿಗೆ ಕುಗ್ಗಿಹೋಗುವುದು, ಮುದುಡು, ಸುರುಳಿಸುತ್ತು, ಅಕ್ಕಿಯ ಸಣ್ಣ ಮುಡಿ ಒಂದೆಡೆಯಾದರೆ ಮದುಮಗಳ ಸಖಿಯು ಇದೇ ಕುರುಂಟು ಆಗಿದ್ದಾಳೆ. ಮದುಮಗಳ ಒಟ್ಟಿಗೆ ಬರುವ ಕುರುಂಟಿಗೆ ಕುರುಂಟು ಮರ್ಯಾದಿಯ ಬಿರ್ದ್  ಇದೆ. ಇದರೊಂದಿಗೆ ಕುರ್ಲೆ, ಕೊಡಿಪು, ಕೊಡಿಪಾಲೆ, ಕುಂಕುರು, ಕುರಲೆ, ಕುರುಂಬಿಲ್, ಕುರುಬಾಕಿಲ್, ಕುರೆ, ಕುರೆಪಾಟ್ ಎಂತೆಲ್ಲಾ ಕುರು ಎಂಬುದು ಸಾಮಾನ್ಯವಾಗಿ ಕಂಡು ಬರುತ್ತದೆ. ದ್ರಾವಿಡಿಯನ್ Etymology ಪ್ರಕಾರ ಕೊಡಿ ಎಂದರೆ Point, Peak , ಕುಡಿ, ಚಿಗುರು ಎಲೆ, ವಂಶ, ವಂಶದ ಕುಡಿ, ಬಾವುಟ, ಪತಾಕೆ, ಅಥವಾ ಧಾರ್ಮಿಕ ವಿಧಿ ಎಂದೆಲ್ಲ ಅರ್ಥಗಳು ಬರುತ್ತವೆ. ತಮಿಳು, ಮಲಯಾಲಂ, ಕೊಡವ ಭಾಷೆಗಳಲ್ಲಿಯು ಕೋಟ ಎಂಬ ಪ್ರಯೋಗದಿಂದ ಇದೇ ಅರ್ಥ ಬರುತ್ತದೆ. ”ಕಲ್ಲ ಮರಾಯಿಡ್ ನೀರ್ ದೆತ್ತೆರ್ ದೇವೆರ್ ಕೈ ಕೊಡಿ ಕಾರ ಕೊಡಿ ದೆಕ್ಯೆರ್ಎಂಬ ಪಾಡ್ದನದ ವ್ಯಾಖ್ಯಾನವಿದೆ. ದೈವ ದೇವರ ಧಾರ್ಮಿಕ ವಿಧಿಯ ಸಂದರ್ಭದಲ್ಲಿ ಮಡಿವಾಳನು ಶುಭಕಾರ್ಯ ನಡೆಯುವ ಸ್ಥಳದ ಮೇಲ್ಗಡೆಯ ಚಪ್ಪರಕ್ಕೆ ಚೌಕಾಕಾರವಾಗಿ ಕಟ್ಟುವ ಬಿಳಿಬಟ್ಟೆಯೂ ಹೌದು. ನಿಷೇಧ, ನಿಷಿದ್ಧ, ಯಂತ್ರ, ತಂತ್ರ, ಮಂತ್ರಗಳ ತಡೆಯ ಸಂಕೇತವಾಗಿ ಇದನ್ನು ಬಳಸುತ್ತಾರೆ. ಕಾಸರಕನ ಗೆಲ್ಲು, ಕೋಲು, ಚೀಂಕ್ರುಗಳನ್ನು ಬಳಸಿ ಕೊಡಿನಡ್ಪುನ ಎಂಬ ಬಳಕೆಯಿದೆ. ”ಕೊಡಿಕುಂಟುಎಂದು ಯಾವುದೇ ದೊಡ್ಡ ಉತ್ಸವದ ಸಂದರ್ಭದಲ್ಲಿ ಇಲ್ಲ್ ಒಕ್ಕೆಲ್  ಸಮಯದಲ್ಲಿ ಯಾರೆಲ್ಲ ಕೆಲಸಗಾರರಾಗಿ ದುಡಿದಿರುತ್ತಾರೊ ಅವರಿಗೆಲ್ಲ ಕೊಡುವ ಬಟ್ಟೆಯೂ ಆಗಿದೆ. ”ಕೊಡಿಯಡಿಎಂದರೆ ದೈವಾರಾಧನೆಯ ಸಂದರ್ಭದಲ್ಲಿ ಭೂತವನ್ನು ಕಟ್ಟುವವನು 'ವಸಯ' ಆಗುವ ಜಾಗದ ದೊಂಪ ಮತ್ತು ಸಿಂಗದನದ ಮೇಲ್ಗಡೆ ಚಪ್ಪರದಲ್ಲಿ ಮಡಿವಾಳ ಬಿಳಿಬಿಟ್ಟೆ ಕಟ್ಟುತ್ತಾನೆ. ಒಂದು ನೆಲೆಯಲ್ಲಿ ಬಟ್ಟೆಯಾದರೆ ಮತ್ತೊಂದು ನೆಲೆಯಲ್ಲಿ ನಿಷೇಧವನ್ನು ಕಾಣಬಹುದು. ಯಾಕೆಂದರೆ ಇಲ್ಲಿಗೆ ಯಾರಿಗೂ ಪ್ರವೇಶವಿಲ್ಲ ಎಂಬುದು ಗಮನಾರ್ಹ. ಅದೇ ರೀತಿಕೊ()ಡಿಕಡ್ಪುನಎಂದರೆ ಮನೆಯಲ್ಲಿ ಯಾವುದೇ ಕಾರಣದಿಂದ ಉಶಾರಿಲ್ಲದವರಿಗೆ ಕಾಯಿಲೆ ಪೀಡಿತರಾದವರಿಗೆ ಒಂದು ನಿಗದಿತ ಪೂರ್ವ ನಿಯೋಜಿತ ದಿನದಂದು ಮಾಂಸಾಹಾರದೊಂದಿಗೆ ದೈವ ದೇವರ ಹೆಸರಿನಲ್ಲಿ ನಲಿಕೆ ಜನಾಂಗದವರು ಅವರು ನಂಬಿದ ದೈವರ ನಂಬಿಕೆಯ ವಿಧಿವಿಧಾನದಲ್ಲಿ ಮಾಡುವ ಪ್ರಾರ್ಥನೆಯು ಆಗಿದೆ. ಇಲ್ಲಿ ಒಂದು ನಿಶ್ಚಿತ ಗಡು ಸಾಂಕೇತಿಕ ನಿಷೇಧವು ಆಗಿರುತ್ತದೆ.
ಕೊಡಿ ಏರುನಎಂದರೆ ದೈವ ದೇವರುಗಳ ಉತ್ಸವಕ್ಕಾಗಿ ಧ್ವಜ ಏರುವುದು. ಇಲ್ಲಿ ಪತಾಕೆ ಬಟ್ಟೆಯ ತುಂಡು, ನಿಷೇಧ ಅರ್ಥಗಳನ್ನು ಕಾಣಬಹುದು. ಕೊಡಿ ಏರಿದ ಮೇಲೆ ಊರ ಹೊರಗೆ, ಗ್ರಾಮದ ಹೊರಗೆ ಹೋಗಿ ತಂಗುವುದುವಿಶೇಷ ಗೌಜಿ, ಶುಭ ಸಮಾರಂಭ , ಮಾಂಸಾಹಾರ ಹೀಗೆ ಇವನ್ನೆಲ್ಲ ಮಾಡಬಾರದೆಂಬ ನಿಯಮಗಳಿವೆ ಹಾಗೆಯೇ ಕೋಡಿ ಎಂದರೆ ಮೂಲೆ, ತುದಿ ಎಂಬ ಸ್ಥಳವಾಚಿಯು ಬಳಕೆಯಲ್ಲಿದೆ. ತೆಲುಗು ಭಾಷೆಯಲ್ಲಿ ಜಲವಾಚಿಯಾಗಿತಗ್ಗಾದ ನೀರಿನ ಬೈಲು”, ನೀರು ಹರಿಯುವ ತೋಡು ಎಂಬ ಪದಾರ್ಥವಿದೆ. ಕೋಡಿ ಮಜಲು, ಬೆಂಗೋಡಿ, ಮುಡೋಡಿ , ಮುಂಡೋಡಿ  ಮುಸ್ಥಳನಾಮಗಳನ್ನು ನಾವು ಕಾಣಬಹುದು.
ಅರದಲ ಮತ್ತೊಂದು ಪದ. ಇದು ದೈವಾರಾಧನೆಯ ಸಂದರ್ಭದಲ್ಲಿ ಭೂತ ನರ್ತಕರು ಮುಖ, ಮೈ ಮೇಲಿನ ಸಿಂಗಾರಕ್ಕಾಗಿ ಹಚ್ಚಿಕೊಳ್ಳುವ ಜಾನಪದ ಬಣ್ಣ. ಇದು ಒಂದು ಬಗೆಯಲ್ಲಿ ನೆಲಮೂಲದ ನೈಜ ಪ್ರಾಕೃತಿಕ ಬಣ್ಣ. ಇಲ್ಲಿ ಮೂಲ ಬಣ್ಣಗಳಾಗಿ ಹಳದಿ, ಕಪ್ಪು, ಕೆಂಪುಗಳಿವೆ. ಮುದ್ರೆ, ಚುಕ್ಕಿ. ಚುಟ್ಟಿ, ಗೆರೆ, ಸುಲಿ, ನಾಮ, ನಾಮ ಬರೆಪ್ಪುನಚುಟ್ಟಿ ಬರೆಪ್ಪುನ, ದಾಡೆ ಬರೆಪ್ಪುನ ಹೀಗೆ ಹಲವುಅರದಲ ಎನ್ನುವಂತದ್ದು ವಿದ್ವಾಂಸರ ನೆಲೆಯಲ್ಲಿ ಇದೊಂದು ಪಾರಿಭಾಷಿಕ ಪದ. ಹಳದಿ, ಅರಶಿಣ ಸಂಬಧಿಸಿದ್ದು ಗಾರ್ಸಿಯ ಪ್ರಭೇದದ ಮರ ಎಂಬ ನೆಲೆಯಲ್ಲಿ ಜಿಜ್ಞಾಸೆಯಿದೆ.

ಕಪ್ಪು ಬಣ್ಣಕ್ಕಾಗಿ ಬೈಹುಲ್ಲನ್ನು ಹೊತ್ತಿಸಿ ಮಸಿ ಮಾಡಿ ಅದನ್ನು ಎಣ್ಣೆಯಲ್ಲಿ ಕಲಸಿಮಯಿಮಾಡಿದರೆ, ತೆಂಗಿನ ಗೆರಟೆ ಸುಟ್ಟು ಮಾಡಿದಚಿಪ್ಪಿ ಕರಿ’ಯನ್ನು ಬಳಸುತ್ತಾರೆ. ಬಿಳಿ ಬಣ್ಣಕ್ಕಾಗಿ ಜೇಡಿ ಅಥವಾ ಅಕ್ಕಿಯನ್ನು ಅರೆದು ಬೊಳ್ಗಲ್ ಪೊಡಿಯಿಂದ ಮಾಡಿದರೆ,   ಹಳದಿ ಬಣ್ಣಕ್ಕಾಗಿ ಆನೆ ಮಂಜೊಲ್, ಬಚ್ಚನಾರೆ ಬೇರ್ ಗಳನ್ನು ಬಳಸುತ್ತಾರೆ. ಮುಖ್ಯವಾಗಿ  ಇಲ್ಲಿ ಅರ, ಅರೆ ಪದಗಳ ಅರ್ಥಗಳನ್ನು ಕಾಣಬಹುದು. ಅರೆದು ಮಾಡುದರಿಂದ ಕ್ರಿಯಾ ಘಟಕದ ನೆಲೆಯಲ್ಲಿ ಅರದಲ ಬಂದಿದೆಯೊ ಎನೋ ಎಂಬ ಕುರುಹು ಇದೆ. ಅರ ಎಂದರೆ ಗರಗಸಗಳನ್ನು ನಯಗೊಳಿಸುವ Multipointಗಳಿರುವ ಸಣ್ಣ ಹತ್ಯಾರು, ಹಲವು ಬಾಯಿ ಇರುವ ಲೋಹದ ವಸ್ತುಗಳನ್ನು ನಯಗೊಳಿಸುವ ಸಾಧನವಾಗಿದೆ. ಅಂಗೈ, ಕೈಯ ಬೆರಳುಗಳಿಂದ ಮುಖ, ದೇಹವನ್ನು   ಉಜ್ಜಿಕೊಳ್ಳುವುದರಿಂದ ಇದು ಒಂದು ನಮೂನೆ ಅರದಿಂದ ಅರೆದಂತೆ ಬಾಸವಾಗುತ್ತದೆ. ಜೊತೆಗೆ ಅರವು, ಆರ್ಕ್(ತಬ್ಬು),  ಅರ್ಕೆಲ್, ಅರೆಪ್ಪು, ಅರಬಾಯಿ, ಅರ್ಕಂಜಿ(ಅರಿನ್ ಕೈಟ್ ಉಳುಂಬುತ್(Friction) ದೆಕ್ಕುನಾ ನೀರ್ ) ಅರಂಟೆಲ್, ಅರಂಜೆಲ್ ಪದಗಳು ಬಲಕೊಡುತ್ತದೆ. 

 'ಅರ್' ಸ್ಥಳನಾಮವಾಗಿಯೂ ಗಮನಿಸಬಹುದು. ತಾರ್, ಸಾರ್, ದೇವರ  ಜಲಸ್ನಾನ ಆರಾಟೊ ಮುಖ್ಯವಾಗಿ ಜಲವಾಚಿಯಾದ ಬಳಕೆಗಳಾಗಿವೆ. ಅರ್ಕುಳ, ಅರಿಯಡ್ಕ, ಅರಂದ್, ಅರಂತೋಡು, ಅರ್ಕಲ, ಕೊಂಬಾರ್, ಮಿಯಾರ್ ಗಳಲ್ಲಿ ಸಾಧಿತ ಮತ್ತು ವಾರ್ಗಿಕ ಅಕೃತಿಮಗಳಾಗಿ ಇವುಗಳು ಸೇರಿಕೊಂಡಿವೆ . ಒಟ್ಟಾರೆ ನೀರಿನಿಂದ ಸೇರಿಸಿ ಅರೆಕಲ್ಲಿನಿಂದ ಅರೆದ ಅರೆಪ್ಪು ಅರದಾಳವಾಯಿತೆಂದರೂ ಆಶ್ಚರ್ಯಪಡಬೇಕಿಲ್ಲ.

ಪನಿ ಅವಾರೊಪನಿವಾರೊ ಪನಿ ಮತ್ತು ಅವಾರೊ ಎಂಬೆರಡು ಶಬ್ದದಿಂದ ಬಂದಿರುವಂತಹುದು. ಪನಿ ಎಂದರೆ ತಂಪು, ಹನಿ, ಸಣ್ಣ, ಸ್ವಲ್ಪ ಎಂಬರ್ಥಗಳಿವೆ. ಇರ್ಪನಿ, ಬಿರ್ಪನಿ, ಧಾರೆ ಪನಿ, ಪನಿನೀರ್, ಪನಿಪ್ಪುನಿ, ಪನಿಪು, ಪನಿ ಕಡಿಪುನ, ಪನಿಕತೆ , ಪನಿಕಪ್ಪೆ, ಪನಿದೊಂಬು, ಪನಿಕುಂಕುಮ ಇಲ್ಲಿ ದೈವಕ್ಕೆ ಬೆಟ್ಟದಷ್ಟು ಬೇಕು. ಮಾನವರಾದ ನಾವು ಅಷ್ಟೆಲ್ಲಾ ನೀಡಲು ಅಸಾಧ್ಯ ಬದಲಾಗಿ ಹನಿಯಷ್ಟು ನೀಡಿದನ್ನು ಬೆಟ್ಟದಷ್ಟು ಎಂದು ತಿಳಿದು ನಾವು ಕೊಡುವ ಅವಾರೊ ಆಹಾರವನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಬೇಕೆಂಬುದು ಆಗಿದೆ. ಅವಾರೊ ಸಂಸ್ಕೃತದ ಆಹಾರದಿಂದ ಬಂದಿದೆ ಎಂದರೂ ದ್ರಾವಿಡದಲ್ಲಿ ಅವ್ ಪ್ರತ್ಯಯ ಭತ್ತ ಅಕ್ಕಿಗೆ ಸಂಬಂಧಿಸಿದ್ದಾಗಿದೆ. ಅವಲ್, ಅವಲಕ್ಕಿ, ಅವಿಲ್ ಎಂಬ ಬಳಕೆ ಕಾಣಬಹುದು. ದೈವಗಳಿಗೆ ಕೊಡಿ ಬಾಲೆ ಎಲೆಯಲ್ಲಿ ಬಡಿಸಿ ಅರ್ಪಿಸುವ ಕಜ್ಜಾಯವು ಹೌದು. ನಮ್ಮ ಸುತ್ತಮುತ್ತಲು ಬೆಳೆಯುವ ನಮ್ಮದೇ ಆಹಾರಗಳಾಗಿರುವ ಬಾಳೆಹಣ್ಣು, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಬೆಲ್ಲ ಪೊರಿಗಳನ್ನು ಒಟ್ಟಾಗಿ ನೀಡುವುದು ನೋಡಬಹುದು. ಇಲ್ಲಿಯು ಪೊರಿ ಮುಖ್ಯವಾದುದರಿಂದ ಅಕ್ಕಿ ಸಂಬಂಧಿ ಪದಾರ್ಥ ಎಂಬುವುದದು ಸ್ಪಷ್ಟವಾಗುತ್ತದೆ. ಪನಿಯಾರದಂತೆ ಬಾರಣೆ, ಬಲಿ, ಬಿಂದು, ಅಂಗಾತ್ನೆ, ಅಗೆಲ್ಆವಾರೊ , ಸರ್ವೆ, ಪಸಾರ್ನೆ, ಭೋಗ ಎಲ್ಲವೂ ಇದೇ ಅರ್ಥ ಕೊಡುತ್ತದೆ.

ತುಳುವಿನಲ್ಲಿ ಇಂತಹ ಬಹಳಷ್ಟು ಶಬ್ದಗಳು ಕುತೂಹಲ ಕೆರಳಿಸುವಂತಿದೆ. ಅವುಗಳ ಸ್ವರೂಪ, ರೂಢಿ, ಲಕ್ಷಣ, ಉಚ್ಚಾರ, ಆಕೃತಿಮಾ ಸಂದರ್ಭಗಳಿಗನುಸಾರವಾಗಿ ಬದಲಾಗುತ್ತವೆ. ಅವು ಪಾರಿಭಾಷಿಕ ಪದಾರ್ಥಗಳಾಗಿರಬಹುದು, ರೂಢಿಪದಗಳಾಗಿರಬಹುದು. ಸಾಂಸ್ಕೃತಿಕ ಸಂಬಂಧ ಬೆಸೆಯುವ ಕೃಷಿ ಸಂಬಂಧಿಗಳು ಆಗಿರಬಹುದು. ತುಳು ಪದದ ಜಿಜ್ಞಾಸೆಯಲ್ಲಿ ತುಲುವೆಂದರೆ ತುಳುವ ಪೆಲಕಾಯಿ, ಮೆದು, ನೀರು ಎಂಬುದನ್ನು ಬಿಟ್ಟು ಅದಕ್ಕಿರುವ ಪರ್ಯಾಯ ಪದಾರ್ಥಗಳಾದ ಆಕ್ರಮಣ, ಕೇರಳೋತ್ಪತಿಯ ತುಳು, ತಮಿಳಿನ ತುಲೈ, ತುರುನಾಡು, ತುರುವೆ, ತುಲ್ಲುನಾ, ತುಳ್ಳಲ್ ಎಲ್ಲ ಮುಖ್ಯ ಪಾತ್ರ ವಹಿಸುತ್ತದೆ ಅದೇ ರೀತಿ ಬೆರ್ಮೆರ್, ಸಿರಿಯ  ಬಿರ್ಮಾಳ್ವ , ಕೋಟಿ ಚೆನ್ನಯರ ಬೆರ್ಮೆರ್, Pietro Della Valle Brimore, ಅಮಿತ್ ಘೋಷ್ B-M-S ಬೊಮ್ಮ, ಬೊಮ್ಮರಸ  ಎಲ್ಲವುಗಳು ಚರಿತ್ರೆ, ಪ್ರಭುತ್ವ, ಆರಾಧನೆ, ನಂಬಿಕೆಗಳ ತುಳುವನ್ನು ಕಟ್ಟಬೇಕಾಗಿದೆ. ಎಲ್ಲೆ-ನಾಳೆ ಎಂಬ ಗಡಿಯು ತೆಂಗಿನಗಡಿಯು ಆಗಬಹುದು. ಕೋಡೆ, ಕೊಡಿ ಎಂಬ ನಿಷೇಧವು ಇರಬಹುದು. Sick ನಿಂದಾದ ಸೀಕು, ಕಾಕಜ್ನಿಂದಾಗಿ ಕಾಕಜಿಯು ಆಗಬಹುದು. ಆಟಿ-ಅರೆಗಾಲೊ, ಮಾಯಿ-ಮರಿಯಾಲೊ, ಮೂರ್ತೆ, ಪೊವುಲು, ಮುಡ್ಕನೆ, ಅಜಮಾರೊ, ಅಜಕೋಲು, ಅಡ್ಯರ, ವರಂಕ, ಕಾಂಗೊ-ದಾವನೆ, ಕುತ್ತಿ-ಕತ್ತಿ ಯಾವುದೇ ಇರಲಿ ಅವುಗಳ ಮೂಲಸ್ವರೂಪಗಳು ವಿಶಿಷ್ಟವಾದುವುಗಳು.

ಮಧ್ಯಮಣಿ ನ್ಯಾಯಎಂಬಂತೆ ಹಾರದ ಮಧ್ಯದಲ್ಲಿ ದೊಡ್ಡದಾಗಿರುವ ಒಂದು ನೀಲಿ ಮಣಿಯನ್ನೋ ಕೆಂಪನ್ನೋ ಪೋಣಿಸಿರುತ್ತಾರೆ. ಅದು ಹಾರದ ಎರಡು ಪಾರ್ಶ್ವಗಳಿಗೂ ಸೌಂದರ್ಯವನ್ನು ಕೊಡುತ್ತದೆ ಅಥವಾ ಮೂಗುತಿಯಲ್ಲಿ ಎರಡು ಮುತ್ತುಗಳ ಮಧ್ಯದಲ್ಲಿ ಕೆಂಪು ಇರುತ್ತದೆ. ಕೆಂಪಿನ ಕಾಂತಿಯೂ ಇಕ್ಕೆಲಗಳ ಮುತ್ತುಗಳ ಮೇಲೆ ಹರಡುತ್ತದೆ. ವಾಕ್ಯದಲ್ಲಿರುವ ಪದಾರ್ಥದಲ್ಲಿರುವ ಶಬ್ದವು ಪೂರ್ವೋತ್ತರ ವಿಷಯಗಳೆರಡಕ್ಕೂ ಸಂಬಂಧವಾದಾಗ ನ್ಯಾಯ ಪ್ರವರ್ತಿಸುತ್ತದೆ. ಇದು ಪದಗಳ ನ್ಯಾಯ.

ಚೀನಾ ಮಹಾಗೋಡೆಯನ್ನು ಹೇಗೋ ದಾಟಿಕೊಂಡು ಒಳಗೆ ನುಸುಳಿದ ವಿದೇಶೀ ಪ್ರವಾಸಿಗನೊಬ್ಬ ಚೀನಿಯವನೊಬ್ಬನಿಗೆ ಕೇಳಿದನಂತೆ ವಿದೇಶಿ ಆಕ್ರಮಣಕಾರರ ಹಾವಳಿಯನ್ನು ತಪ್ಪಿಸಲು ಇಂತಹ ದೊಡ್ಡ ಗೋಡೆಯನ್ನು ಕಟ್ಟಿದ್ದೀರಾ ಎಂದು? ಪ್ರಶ್ನೆಗೆ ಚೀನಿಯನು ಕೊಟ್ಟ ಉತ್ತರ ಅದು ಹಾಗಲ್ಲ !! ‘ವಿದೇಶಿಯರ ಸಂಸ್ಕೃತಿ ಚೀನಾದಲ್ಲಿ ಬರಬಾರದೆಂದು ಗೋಡೆ ಕಟ್ಟಿದ್ದೇವೆಎನ್ನುತ್ತಾನೆ ತರಹದ ಭಾಷಿಕ ನೆಲೆಯ ಗೋಡೆ ನಾವು ಕಟ್ಟಿಕೊಂಡು ಪದ, ಶಬ್ದ, ಮಾತುಗಳನ್ನು ಜತನದಿಂದ ಕಾಪಾಡುತ್ತಾ ಬೆಳೆಸುವುದು ಉತ್ತಮ.

ಹೀಗೆ ತುಳುವಿನ ಅನನ್ಯತೆಯ, ಅಸ್ಮಿತೆಯ ಪ್ರಾದೇಶಿಕತೆಯು ಗುರುತಾಗಿಸಿ ಪ್ರತಿ ಪದಾರ್ಥಗಳ ಸವಿರುಚಿ ಹುಡುಕುವುದೆಂದರೆ ಅದು ಮಳೆಗಾಲದ ಡೆಂಜಿ ಬೋಂಟೆಯಷ್ಟೆ ಸೊಗಸು. ಒಂದು ಹುಡುಕಿದರೆ ಮತ್ತೊಂದು ಮಗದೊಂದು ಎಂದು ಪದಾರ್ಥಗಳ ಬೇಟೆ ಖುಷಿಯ ಕೊಡುತ್ತದೆ. ಕರಾವಳಿಯ ತುಳುನಾಡಿನಲ್ಲಿ ಹಲವು ಸಮುದಾಯಗಳು, ಪ್ರಾದೇಶಿಕ ಭಿನ್ನತೆಯೊಂದಿಗೆ ಹಲವು ತುಳು ಶಬ್ದ, ಪದಗಳನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಆಧುನಿಕತೆಯ ಕೊಡಿ ಅಡ್ಡ ಬರದೇ ಎಲ್ಲ ಕಡೆಯು ಬಿತ್ತು ಹಾಕಿಕೊಂಡು ಪನಿವಾರದಂತೆ ಎಲ್ಲರೂ ಸ್ವಲ್ಪ ಸ್ವಲ್ಪವೇ ಬಳಸುತ್ತಾ ಶಬ್ದ ಭಂಡಾರದೊಂದಿಗೆ ಆಟವಾಡುತ್ತಾ, ಅನನ್ಯತೆಯೊಂದಿಗೆ ಉಳಿಸಿಕೊಂಡು ಸಾಂಸ್ಕೃತಿಕವಾಗಿ ಬೆಳೆಸೋಣ ಎಂಬುದೇ ಆಶಯ.

ಸುಳ್ಯ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ 2019 ಇದರಲ್ಲಿ ಪ್ರಕಟವಾದ ಬರಹ.


Tuesday, June 11, 2019

Wikimedians are at AIR Mangaluru


I was really surprised to get an early morning call from Dr. Sheni, Principal PU College Mangaluru, an educationalist, & folklorist. The reason for the call added my surprise he got a message from AIR Mangaluru inviting Tulu Wikimedians for a discussion.

I feel extremely proud to share the memorable experience of visiting All India Radio Mangaluru station as a part of the Karavali Wikimedians outreach program.

We a team of Six Karavali Wikimedians Dr. Vishwanatha Badikana a professor Kannada Department of Saint Aloysius College Mangaluru,  Dr. Kishore Kumar Rai Sheni Principal Ramakrishna Pre University College Bunts Hostel Mangaluru,

(from Left Dr. Vishwanatha Badikana, Dr. Kishore Kumar Rai Sheni, Dr. Sadananda Perl, Dr. A V Navada, Bharathesha Alasandemajalu and Mrs. Akshatha Raj Perla(standing))

Dr. A V Navada former Kannada Professor from Hampi University Karnataka along with two Women Wikimedians Mrs. Vinodha Rai & Mrs. Kavitha Ganesh & myself BharatheshaAlasandemajalu took part in a fruitful discussion of around one hour at All India Radio Mangaluru on 18 March 2019

I wish to underline that this is not our first visit, Dr. Sadananda Perla program coordinator & staff coordinator Mrs. Akshatha Raj of All India Radio Mangaluru had also given us an opportunity to participate in a program in a previous occasion. But this was a memorable day one can cherish. I will treat this as recognition for the humble work we have done with limited resources available to us.

Dr. Vishwanatha Badikana explained about how to edit the Tulu Wikipedia & its significance in days ahead. He elucidated how this can act as a beneficiary for future research students as well as for those contributing to have an archive including Wikisource & Wikicommons.
Mr. Kishore Kumar acted as program co-manager, his questions were very relevant to the subject & he was persuasive & logical in his questions.

Dr. A V Navada guided the Karavali Wikimedians, how to utilize the sources available presently with the help of Tulu Academy a Govt Body of Karnataka state. He Enlighted about copyright of books using to Wikisource & requested all Tulu writers to give their right to Karavali Wikimedians for preserving knowledge & exhorted listeners to edit & read Wikipedia for boosting the reach vocal knowledge of Tulu.

Myself Bharathesha Alasandemajalu explained about uses of Tulu Wikipedia template. How to navigate & find the right article at the right time for editing. About Wiktionary work, currently it is in incubator stage how to come out from incubator & make it live, as a postgraduate student of Tulu MA from Mangaluru University it sounds a lot, an online dictionary,  it will help me & also the student fraternity.  


In addition gave some very valued suggestions also, how Tulu as a language can improve, as an alternative to conducting a number of lavish financial burden programs, Organizing conclaves & conducting competition between school, college in cluster, Taluk & District level will be more meaningful. Children of Tulunadu will talk & think in his native language, that's how to preserve the language in the era of globalization.

Mrs. Vinodha & Kavitha discussed the activities of Women's Wikipedia & illustrated their active wiki project about topics related to women health.

We canopy light on our project about new initiation ‘ Wikimedians Home to Home ’ this is a special & innovative function. Here we are preserving & reconstructing folk art & dance by text document.

Listen Here 

Regards,

Bharathesha Alasandemajalu


Wednesday, March 13, 2019

ನನ್ನಜ್ಜಿ, ನಿಮ್ಮಜ್ಜಿಯಂತೆ  ಪಿರಿಪಿರಿ ಮರೆ, ಬೆಳಗ್ಗೆ ಬೇಗ ಎದ್ದು ನನ್ನ ಪುಟಾಣಿ ಕೊಡಪಾನವನ್ನು ಗೊತ್ತಾಗದ ಹಾಗೆ ತೆಗೆದುಕೊಂಡು ಹೋಗಿ ತುಲಸಿಗೆ ನೀರು ಹಾಕುತ್ತಾಳೆ, ಮನೆಯ ಎಡ ಮಗ್ಗುಲಲ್ಲಿ ಇರುವ ಪಾರಿಜಾತ ಹೂ, ಎದುರು ಇರುವ ಬಿಳಿ ದಾಸವಾಳ, ದೈವ ಚಾವಡಿಯ ಹತ್ತಿರದ ಸಂಪಿಗೆಗಳನ್ನು ಒಟ್ಟು ಮಾಡಿ ಕೆಲವನ್ನು ತುಳಸಿ ಕಟ್ಟೆಯಲ್ಲಿಟ್ಟು, ಉಳಿದದ್ದನ್ನು ದೇವರ ಕೊನೆಯಲ್ಲಿ ಇಡುತ್ತಾಳೆ,...ಮತ್ತೆ ಒಂದು ಸುತ್ತಿನ ಮನೆ ಗುಡಿಸುವಿಕೆ, ನಾವು ಪಿನ್ನೆ ಪಿಟ್ಟೆಗಳು ಎದುರಿನ ಅಂಕಣದಲ್ಲಿ ಮಲಗಿ, ಸೂರ್ಯ ಬೆಳಕು ನಮ್ಮನ್ನು ಮುತ್ತಿಡುತಿದ್ದರೆ ಮೆಲ್ಲಗೆ ಮಕ್ಕಳ ಕುಂಡೆಗೆ ಬೆಳಗು ಬಿದ್ರು ಎದ್ದೇಳಲಿಕ್ಕೆ ಆಗಿಲ್ಲ ಅಂತ ಪರೆಂಚಲು ಸುರು ... ಅದು ನಮ್ಮ ರೇಡಿಯೋ ಪ್ರದೇಶ ಸಮಾಚಾರ ಬಿತ್ತರಿಸುವ ಸಮಯ, ಆದುದರಿಂದ ಆಗ ಮಾತ್ರ ಅಜ್ಜಿ ಸುದ್ದಿ ಇರುವುದಿಲ್ಲ ಕಾರಣ ಅಜ್ಜ ಕೇಳುತಿರುತ್ತಾರಲ್ಲ ಹಾಗೆ ಹಹಃ ... 
ಮನೆಯೊಳಗೆ ಕೈಟಾ ಆಡಿದ್ರೆ ಅಂಗಳಕ್ಕೆ ಹೋಗಿ ಅನ್ನುವವರು ಕಾರಣವೇನಿಲ್ಲ ಅವರೇ ಅಲ್ವೇ ಇವತ್ತು ಬೆಳಗ್ಗೆ ಮನೆ ಗುಡಿಸಿದ್ದು, ನಮ್ಮ ಲೋಟನೆ ಸಾಮಾನುಗಳನ್ನು ಎಲ್ಲೆದರಲ್ಲಿ ಬಿಸಾಡಿ, ತೆಂಗಿನ ಗರಿ, ಮಣ್ಣು ಮಸಿ ಎಲ್ಲ ಚೆಲ್ಲಾಡಿದ್ರೆ  ಯಾರಿಗೆ ತಾನೇ ಸಿಟ್ಟು ಬರದು. ಆದರೂ ನಮ್ಮ ಲೊಟನೆಗಳನ್ನು ಜೋಪಾನವಾಗಿ ಮೇಲೆ ತೆಗೆದು ಇಡುತ್ತಿದ್ದರು, ನಮ್ಮ ಟ್ಯಾಂಕರು ಲಾರಿ, ಐಸ್ ಕ್ರೀಮ್ ಬಾಲ್, ಅದರ ಚಮಚ, ಪೀಮಾವ ಮಾಡಿಕೊಟ್ಟ ಲೆಂಕಿರಿಯ ಕೊಳಲು, ಮತ್ತೆ ಅತ್ತೆ ಮನೆಯಿಂದ ಬರುವಾಗ ಚಿತ್ರ ನೋಡಲು ತಂದ ಮಂಗಳ ಪತ್ರಿಕೆ, ಸುಬ್ರಮಣ್ಯ ಷಷ್ಠಿಯಿಂದ ತಂದ ಟಕ ಕಟ ಹೇಳುವ ಕಪ್ಪೆ, ಪುತ್ತೂರು ಕಂಬಲದಿಂದ ತಂದ ಪೀಪಿ ಇನ್ನು ಏನೇನೊ ತುಂಬಿರುತ್ತಿತ್ತು. 
ನದರು 

ನಮ್ಮಜ್ಜಿಯ ಬ್ರಾಂಡ್ ಐಸ್ ಕ್ಯಾಂಡಿ ಅಂದರೆ ಕೇಶವಣ್ಣನ "ಪೇರ್ ತ" ಮತ್ತೆ "ಬೆಲ್ಲೊತ"   ಆದರೆ ಹಿಮಕೆನೆ ಕೊಟ್ಟರೆ ಅಯ್ಯಯ್ಯೋ  ಚವ್ಲಿ ಚವ್ಲಿ ಅಂತ ಅಷ್ಟೊಂದು ಇಷ್ಟ ಇಲ್ಲ , ಅದೇ ಚಾಯ ದಿಕ್ಕೆಲಿನಿಂದಲೇ ತೆಗೆದು ಅರ್ಕಂಜಿಯ ಹಾಗೆ ಕುಡಿಯುವಾಗ ಬಿಸಿ ಇರುವುದಿಲ್ಲ ಮರೆ. 

ಕಾರಲ್ಲಿ ಹೋಗೋದು , ಬಸ್ಸಲ್ಲಿ  ಹೋಗೋದು ಅಂದ್ರೆ ಕಾಲು ಕೊಕ್ಕೆ ಕಟ್ಟುವುದು ಏನು... ಕಾಲು ಏಳೆಯುವುದು ಏನು, ಬೆನ್ನು ನೋವು ಏನು ... ಅದು ಇದು ನೆಪ...  ನಡೆದುಕೊಂಡು ೫ಕೀ.ಮಿ ದೂರದ  ಅಂಬರಪದವು ಗುಡ್ಡದ ಶಿಖರದವರೆಗೂ ಹೋಗ್ತಾರೆ.
.


ಶೀತ ಜ್ವರಕ್ಕೆ ಇಂಗ್ಲೀಷ್ ಮದ್ದು ಅಗಲ್ಲ ಅದು ಕಹಿಯಂತೆ, ಆ ಕಾಳ್ ಜೀರಿಗೆ ಕಾಷಾಯ ೧೦ ಮುಕ್ಕುಲಿಯಾದ್ರೂ ಕುಡಿತ್ತಾರೆ, ಪೇರಲ ಕೊಡಿ, ಅಮೃತ ಬಳ್ಳಿ, ನೆಲ ನೆಲ್ಲಿ, ಕಟ್ರೆ ಗಿಡ ಅದು ಇದು ಹಾಕಿ ಎಷ್ಟು ಕೈಪೆ ಆದ್ರೂ ಬುಲ್ಕ ಅಂತ ಹೊಟ್ಟೆಗೆ ಹೋಗ್ತದೆ. 

 
ಅಂಗಡಿಯಾ ಬೇರೆ ತಿಂಡಿ ಕೊಟ್ಟರೆ ಹಲ್ಲಿಲ್ಲ ಅಂತರೆ, ಎಲೆ ಅಡಿಕೆ ಜಗಿದು ತಿನ್ನುತ್ತಾರೆ, ಚಕ್ಕುಲಿ ಕಟು ಕುಟು ಅಂತ ಶಬ್ದ ಬರ್ತದೆ. 

ಸಂಜೆ ಟಿವಿಯಲ್ಲಿ ಯಾವುದಾದರೂ ಚಲನಚಿತ್ರ ಗೀತೆ ಬಂದ್ರೆ ಇದೆಂಥ ಮರ್ಲು ನಲಿಕೆ, ರೇಡಿಯೋ ಕೇಳಿಸು ಮಂಗಳೂರು ಆಕಾಶವಾಣಿಯಲ್ಲಿ ಪಾರ್ದನ ಬರುತ್ತದೆ.  

ಚಂದದ ರೇಷ್ಮೆ ಸಾರಿ ಕೊಟ್ರೆ, ಇದು ಒಳ್ಳೆದಿಲ್ಲ, ಮಾಸಿ ಹೋಗಿದೆ,  ಸೊಂಟದಲ್ಲೇ ನಿಲ್ಲೋದಿಲ್ಲ !!

ಮನೆಗೆ ಕಂಬಳಿಯೋ, ಮಡಕೆಯೋ , ಮತ್ತಿನ್ನೆನ್ನೋ ಮಾರಿಕೊಂಡು ಬಂದರೆ, ಮನೆಯಲ್ಲಿ ಎಲ್ಲರೂ ಇದ್ರೂ .." ಮನೆಯಲ್ಲಿ ಯಾರಿಲ್ಲ ಮುಂದೆ ಹೋಗಿ " ಎಂತ ಸ್ವಾರ್ಥಿ ಅಜ್ಜಿ ... 


ಪ್ರಾಯಕ್ಕೆ ಬಂದವರನ್ನು ಮಾತನಾಡಿಸುತ್ತಾ ನನ್ನಜ್ಜಿ ಶುರು ಮಾಡುವುದೇ ಮದುವೆ ಆಗಿದೆಯಾ ?(ಮದಿಮೆ ಅತುಂಡ ?) ಅಂತ ಮತ್ತೆ ನನ್ನ ಕಡೆ ತಿರುಗಿ ೧೪ ವರ್ಷದಲ್ಲಿ ಇವನ ದೊಡ್ಡಪ್ಪ , ೧೬ ವರ್ಷದಲ್ಲಿ ಇವನ ೨ನೇ ದೊಡ್ಡಪ್ಪ ಮತ್ತೆ ಇವನಪ್ಪ ..... ಅಜ್ಜಿಗೆ, ಮಕ್ಕಳು , ಮದುವೆ , ಮೊಮ್ಮಕ್ಕಳ ಮದುವೆ ಇದೆ ಆಲೋಚನೆ ಎಂಚಿನ ಪಿರಿಪಿರಿ ಮಾರೆರೆ ..!!


ನನ್ನ ಅಜ್ಜಿಗೆ ಗಡಿಯಾರ ನೋಡಲು ಬರಲ್ಲಾ, ಅದರೂ ಬೆಳಗ್ಗೆ ಸೂರ್ಯನನ್ನೇ ಎಬ್ಬಿಸುತ್ತಾರೆ, ೧೦ ಗಂಟೆಗೆ ಚಾಯ ಕುಡಿತಾರೆ , ೧ ಗಂಟೆಗೆ ಊಟನೂ ಮಾಡ್ತಾರೆ , ಮತ್ತೆ ಸಂಜೆ ೪ ಗಂಟೆಗೆ ಬಯ್ಯಾ ತ ಚಾಯ ಕುಡಿತಾರೆ ನಂಗೆ ಮಾತ್ರ ಆಶ್ಚರ್ಯ ..... ಹೇಗೆ !!!!!

ಹೌದು ಬೆಳಗ್ಗೆ ನಮ್ಮ ಸೇಲಂ ಹುಂಜನ ಕೂಗಿಗೆ, ೧೦ ಗಂಟೆಗೆ ತುಳಸಿ ಕಟ್ಟೆಯ ನೆರಳಿಗೆ, ಮಧ್ಯಾನ ಪಲ್ಲಿಯಲ್ಲಾಗುವ ಬಾಂಗಿಗೆ, ಸಂಜೆ ಮಾಡಿನ ನೆರಳಿಗೆ. 


ಆಧುನಿಕ ಪ್ರಪಂಚದ ಧಾವಂತಗಳು ಮನುಷ್ಯಸಹಜ ಭಾವನೆಗಳನ್ನು, ಸಂಬಂಧಗಳನ್ನು, ಸಂಭ್ರಮಿಸುವ ಮನಸ್ಸುಗಳನ್ನು, ಬಾಲ್ಯದ ಸುಂದರ ಅನುಭೂತಿಯನ್ನು ನಮ್ಮಿಂದ ಅನಾಮತ್ತಾಗಿ ಕಸಿದುಕೊಂಡುಬಿಟ್ಟಿವೆ. ಹಣ ಗಳಿಸುವ ಅನಿವಾರ‌್ಯತೆಯ ಮುಂದೆ ಬೇರೆಲ್ಲ ಸಂತಸಗಳನ್ನೂ ನಾವೇ ಗೌಣವಾಗಿಸಿಕೊಂಡಿದ್ದೇವೆ. ದಿನನಿತ್ಯದ ಗಡಿಬಿಡಿಯ ಬದುಕು, ಇಷ್ಟವಿಲ್ಲದಿದ್ದರೂ ಅನಿವಾರ‌್ಯವಾಗಿ ಮಾಡಬೇಕಾದ ಕೆಲಸಗಳು ಎಲ್ಲವೂ ಸೇರಿ ನಮ್ಮೊಳಗಿನ ಮನುಷ್ಯತನದ ಮೂಲಸತ್ವವನ್ನೇ ನಿರ್ಜೀವಗೊಳಿಸಿವೆ. ಎಲ್ಲೋ ಮಗುವೊಂದು ತುಂಟಾಟ ಮಾಡಿದಾಗ, ಅಜ್ಜ-ಅಜ್ಜಿಯರು ಬೊಚ್ಚು ಬಾಯಿಯಲ್ಲಿ ನಕ್ಕಾಗ ಅರಿವಿಲ್ಲದ ಸಂತಸವೊಂದು ಮನಸ್ಸಲ್ಲಿ ಹುಟ್ಟಿಕೊಂಡು ಬಾಲ್ಯದ ಸುವರ್ಣ ಯುಗವನ್ನು ಕಣ್ಮುಂದೆ ತರುತ್ತದೆ. ಮರೆಯಲ್ಲೇ ವಿಷಾದದ ಕಾರ‌್ಮೋಡವೂ ಸುತ್ತುವರಿಯುತ್ತದೆ.

ಅಜ್ಜ-ಅಜ್ಜಿ ಎಂಬ ಹಳೆ ತಲೆಮಾರು ಮತ್ತು ಮೊಮ್ಮಕ್ಕಳೆಂಬ ಹೊಸ ತಲೆಮಾರಿನ ನಡುವೆ ಅಕ್ಕರೆಯ ಬೆಸುಗೆಯೊಂದು ಬೆಸೆವ ಸಮಯ ಅದು. ಹಳೆ ಬೇರಿನ ಸತ್ವಗಳನ್ನೆಲ್ಲ ಹೊಸ ಚಿಗುರು ಹೀರಿಕೊಳ್ಳುವುದಕ್ಕಿರುವ ಸದವಕಾಶ ಅದು. ಶಾಲೆಯ ಮೆಟ್ಟಿಲನ್ನೂ ಹತ್ತದ ಅಜ್ಜ-ಅಜ್ಜಿಯರು ಬದುಕಿನ ಅನುಭವದಿಂದಲೇ ಪಡೆದ ಡಾಕ್ಟರೇಟ್ ಪದವಿಯನ್ನು ಕಂಡು ಮೊಮ್ಮಕ್ಕಳು ಕಣ್ಣರಳಿಸುವ ಸಮಯ ಅದು. ಮೊಮ್ಮಕ್ಕಳ ಪ್ರತಿ ಚೇಷ್ಟೆಯನ್ನೂ ಸಹಿಸಿಕೊಂಡು, ಅವರ ಬಯಕೆಗಳನ್ನೆಲ್ಲ ಈಡೇರಿಸುತ್ತಾ, ಎಪ್ಪತ್ತು-ಎಂಬತ್ತರಲ್ಲೂ ಹುಡುಗುತನದ ಸಂಭ್ರಮವನ್ನು ಅನುಭವಿಸುವ ಅಜ್ಜ-ಅಜ್ಜಿ ಎಂಬ ಪಾತ್ರಕ್ಕೆ ಮೊಮ್ಮಕ್ಕಳ ಮನಸ್ಸಿನಲ್ಲಿ ಆತ್ಮೀಯತೆ ತುಂಬಿದ ಗೌರವದ ಸ್ಥಾನ ಎಂದೆಂದಿಗೂ ಇರುತ್ತದೆ. 

ಕುಸಲ್

* ಇರೆನ್ ದೆಪ್ಪೊಡ ಅತ್ತ್ ಅಲೆನ್ ಕೊರ್ಪರಾ
(ಭಟ್ರೇ ಇಲ್ಲಡೆ ಪೋಯಿ ಬೇತೆ ಜಾತಿತಾಯೆ ವನಸ್ ಅಯಿಬುಕ್ಕ ಇಂಚ ಪಂಡೆಗೆ)


ತುಳು ಪದೋ - ಕೈ

ಕೈಲ್, ಕೈಮರಾಯಿ, ಕೈಕಂಜಿ, ಕೈಯಾಟೊ, ಕೈಬಾಯಿ, ಕೈತಾಟಿ, ಕೈಕೋಲು, ಕೈವೀಸೊ, ಕೈ ಪಾಡ್, ಕೈಪತ್ತಪುನ, ಕೈ ಕಿನ್ನಿ, ಕೈ ಕೊಟ್ಟು , ಕೈ ಸಾಲ , ಕೈ ಭಾಷೆ, ಕೈ ಪಾತೆರ , ಕೈ ಕಾರ್ , ಕೈ ಚೀಲ , ಕೈ ಕೋಲ , ಕೈ ಕುಡರಿ , ಕೈ ತಾಂಗ್ , ಕೈ ಕೈ, ಕೈ ಮಾಸ್, ಕೈಕಾರ, ಕೈ ಪತ್ತವನು, ಕೈ ದಾರೆ, ಕೈ ಕುಞಿ, ಕೈ ತೋಡು, ಮೇಲ್ ಕೈ, ಗೇಲ್ ಕೈ, ಕೈಲಾಸ, ಕೈ ತುತ್ತು, ಕೈಕಂಬ, ಕೈದ್, ಕೈಲ್, ಕೈಪು, ಕೈಪೆ, ಕೈಸೆಟ್ಟಿ, ಕೈ ಪೇತ್, ಕೈ ಬೇವು, ಕೈಸಾಲೆ, ಕೈ ಬಿತ್ತ್, ಕೈ ಜಾರು, ಕೈ ಮೇಲ್, ಕೈತಲ್, ಕೈ ಮರಯಿ, ಕೈಮರ, ಕೈ ಬಿರೆಲ್, ಕೈಪ್ಪುರ, ಕೈಮೋನೆ, ಕೈನಾಲಾಯಿ, ಕೈ ಪೊಲ್ಲಿಗೆ, ಕೈತ್ತಲ್, ಕೈದ್, ಕೈಗುಣ

ತುಳು ವಿಕಿಪೀಡಿಯಾ

ತುಳು ವಿಕಿಪೀಡಿಯ ಒಂಜಿ ತುಳುವೆರೆನ್, ತುಳುವ  ಸಂಸ್ಕೃತಿ, ತುಳು ನೆಲೆ ಬಿಲೆನ್, ಪೊರ್ಲ ಪೊಲಿಕೆನ್ ಪಿದಾಯಿಬಲೆಕ್ ಪಟ್ಟುನವು. ಮುಲ್ಪ ಏರ್ ಬೋಡಾಂಡಲ ಬರೆವೊಲಿ, ಅಂಡ ಅವು ಒಂಜಿ ವಿಕಿತಾ ರೀತಿ ನಿತಿಡ್ ಇಪ್ಪೊಡು

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...