Tuesday, June 11, 2019

Wikimedians are at AIR Mangaluru


I was really surprised to get an early morning call from Dr. Sheni, Principal PU College Mangaluru, an educationalist, & folklorist. The reason for the call added my surprise he got a message from AIR Mangaluru inviting Tulu Wikimedians for a discussion.

I feel extremely proud to share the memorable experience of visiting All India Radio Mangaluru station as a part of the Karavali Wikimedians outreach program.

We a team of Six Karavali Wikimedians Dr. Vishwanatha Badikana a professor Kannada Department of Saint Aloysius College Mangaluru,  Dr. Kishore Kumar Rai Sheni Principal Ramakrishna Pre University College Bunts Hostel Mangaluru,

(from Left Dr. Vishwanatha Badikana, Dr. Kishore Kumar Rai Sheni, Dr. Sadananda Perl, Dr. A V Navada, Bharathesha Alasandemajalu and Mrs. Akshatha Raj Perla(standing))

Dr. A V Navada former Kannada Professor from Hampi University Karnataka along with two Women Wikimedians Mrs. Vinodha Rai & Mrs. Kavitha Ganesh & myself BharatheshaAlasandemajalu took part in a fruitful discussion of around one hour at All India Radio Mangaluru on 18 March 2019

I wish to underline that this is not our first visit, Dr. Sadananda Perla program coordinator & staff coordinator Mrs. Akshatha Raj of All India Radio Mangaluru had also given us an opportunity to participate in a program in a previous occasion. But this was a memorable day one can cherish. I will treat this as recognition for the humble work we have done with limited resources available to us.

Dr. Vishwanatha Badikana explained about how to edit the Tulu Wikipedia & its significance in days ahead. He elucidated how this can act as a beneficiary for future research students as well as for those contributing to have an archive including Wikisource & Wikicommons.
Mr. Kishore Kumar acted as program co-manager, his questions were very relevant to the subject & he was persuasive & logical in his questions.

Dr. A V Navada guided the Karavali Wikimedians, how to utilize the sources available presently with the help of Tulu Academy a Govt Body of Karnataka state. He Enlighted about copyright of books using to Wikisource & requested all Tulu writers to give their right to Karavali Wikimedians for preserving knowledge & exhorted listeners to edit & read Wikipedia for boosting the reach vocal knowledge of Tulu.

Myself Bharathesha Alasandemajalu explained about uses of Tulu Wikipedia template. How to navigate & find the right article at the right time for editing. About Wiktionary work, currently it is in incubator stage how to come out from incubator & make it live, as a postgraduate student of Tulu MA from Mangaluru University it sounds a lot, an online dictionary,  it will help me & also the student fraternity.  


In addition gave some very valued suggestions also, how Tulu as a language can improve, as an alternative to conducting a number of lavish financial burden programs, Organizing conclaves & conducting competition between school, college in cluster, Taluk & District level will be more meaningful. Children of Tulunadu will talk & think in his native language, that's how to preserve the language in the era of globalization.

Mrs. Vinodha & Kavitha discussed the activities of Women's Wikipedia & illustrated their active wiki project about topics related to women health.

We canopy light on our project about new initiation ‘ Wikimedians Home to Home ’ this is a special & innovative function. Here we are preserving & reconstructing folk art & dance by text document.

Listen Here 

Regards,

Bharathesha Alasandemajalu


Wednesday, March 13, 2019

ನನ್ನಜ್ಜಿ, ನಿಮ್ಮಜ್ಜಿಯಂತೆ  ಪಿರಿಪಿರಿ ಮರೆ, ಬೆಳಗ್ಗೆ ಬೇಗ ಎದ್ದು ನನ್ನ ಪುಟಾಣಿ ಕೊಡಪಾನವನ್ನು ಗೊತ್ತಾಗದ ಹಾಗೆ ತೆಗೆದುಕೊಂಡು ಹೋಗಿ ತುಲಸಿಗೆ ನೀರು ಹಾಕುತ್ತಾಳೆ, ಮನೆಯ ಎಡ ಮಗ್ಗುಲಲ್ಲಿ ಇರುವ ಪಾರಿಜಾತ ಹೂ, ಎದುರು ಇರುವ ಬಿಳಿ ದಾಸವಾಳ, ದೈವ ಚಾವಡಿಯ ಹತ್ತಿರದ ಸಂಪಿಗೆಗಳನ್ನು ಒಟ್ಟು ಮಾಡಿ ಕೆಲವನ್ನು ತುಳಸಿ ಕಟ್ಟೆಯಲ್ಲಿಟ್ಟು, ಉಳಿದದ್ದನ್ನು ದೇವರ ಕೊನೆಯಲ್ಲಿ ಇಡುತ್ತಾಳೆ,...ಮತ್ತೆ ಒಂದು ಸುತ್ತಿನ ಮನೆ ಗುಡಿಸುವಿಕೆ, ನಾವು ಪಿನ್ನೆ ಪಿಟ್ಟೆಗಳು ಎದುರಿನ ಅಂಕಣದಲ್ಲಿ ಮಲಗಿ, ಸೂರ್ಯ ಬೆಳಕು ನಮ್ಮನ್ನು ಮುತ್ತಿಡುತಿದ್ದರೆ ಮೆಲ್ಲಗೆ ಮಕ್ಕಳ ಕುಂಡೆಗೆ ಬೆಳಗು ಬಿದ್ರು ಎದ್ದೇಳಲಿಕ್ಕೆ ಆಗಿಲ್ಲ ಅಂತ ಪರೆಂಚಲು ಸುರು ... ಅದು ನಮ್ಮ ರೇಡಿಯೋ ಪ್ರದೇಶ ಸಮಾಚಾರ ಬಿತ್ತರಿಸುವ ಸಮಯ, ಆದುದರಿಂದ ಆಗ ಮಾತ್ರ ಅಜ್ಜಿ ಸುದ್ದಿ ಇರುವುದಿಲ್ಲ ಕಾರಣ ಅಜ್ಜ ಕೇಳುತಿರುತ್ತಾರಲ್ಲ ಹಾಗೆ ಹಹಃ ... 
ಮನೆಯೊಳಗೆ ಕೈಟಾ ಆಡಿದ್ರೆ ಅಂಗಳಕ್ಕೆ ಹೋಗಿ ಅನ್ನುವವರು ಕಾರಣವೇನಿಲ್ಲ ಅವರೇ ಅಲ್ವೇ ಇವತ್ತು ಬೆಳಗ್ಗೆ ಮನೆ ಗುಡಿಸಿದ್ದು, ನಮ್ಮ ಲೋಟನೆ ಸಾಮಾನುಗಳನ್ನು ಎಲ್ಲೆದರಲ್ಲಿ ಬಿಸಾಡಿ, ತೆಂಗಿನ ಗರಿ, ಮಣ್ಣು ಮಸಿ ಎಲ್ಲ ಚೆಲ್ಲಾಡಿದ್ರೆ  ಯಾರಿಗೆ ತಾನೇ ಸಿಟ್ಟು ಬರದು. ಆದರೂ ನಮ್ಮ ಲೊಟನೆಗಳನ್ನು ಜೋಪಾನವಾಗಿ ಮೇಲೆ ತೆಗೆದು ಇಡುತ್ತಿದ್ದರು, ನಮ್ಮ ಟ್ಯಾಂಕರು ಲಾರಿ, ಐಸ್ ಕ್ರೀಮ್ ಬಾಲ್, ಅದರ ಚಮಚ, ಪೀಮಾವ ಮಾಡಿಕೊಟ್ಟ ಲೆಂಕಿರಿಯ ಕೊಳಲು, ಮತ್ತೆ ಅತ್ತೆ ಮನೆಯಿಂದ ಬರುವಾಗ ಚಿತ್ರ ನೋಡಲು ತಂದ ಮಂಗಳ ಪತ್ರಿಕೆ, ಸುಬ್ರಮಣ್ಯ ಷಷ್ಠಿಯಿಂದ ತಂದ ಟಕ ಕಟ ಹೇಳುವ ಕಪ್ಪೆ, ಪುತ್ತೂರು ಕಂಬಲದಿಂದ ತಂದ ಪೀಪಿ ಇನ್ನು ಏನೇನೊ ತುಂಬಿರುತ್ತಿತ್ತು. 
ನದರು 

ನಮ್ಮಜ್ಜಿಯ ಬ್ರಾಂಡ್ ಐಸ್ ಕ್ಯಾಂಡಿ ಅಂದರೆ ಕೇಶವಣ್ಣನ "ಪೇರ್ ತ" ಮತ್ತೆ "ಬೆಲ್ಲೊತ"   ಆದರೆ ಹಿಮಕೆನೆ ಕೊಟ್ಟರೆ ಅಯ್ಯಯ್ಯೋ  ಚವ್ಲಿ ಚವ್ಲಿ ಅಂತ ಅಷ್ಟೊಂದು ಇಷ್ಟ ಇಲ್ಲ , ಅದೇ ಚಾಯ ದಿಕ್ಕೆಲಿನಿಂದಲೇ ತೆಗೆದು ಅರ್ಕಂಜಿಯ ಹಾಗೆ ಕುಡಿಯುವಾಗ ಬಿಸಿ ಇರುವುದಿಲ್ಲ ಮರೆ. 

ಕಾರಲ್ಲಿ ಹೋಗೋದು , ಬಸ್ಸಲ್ಲಿ  ಹೋಗೋದು ಅಂದ್ರೆ ಕಾಲು ಕೊಕ್ಕೆ ಕಟ್ಟುವುದು ಏನು... ಕಾಲು ಏಳೆಯುವುದು ಏನು, ಬೆನ್ನು ನೋವು ಏನು ... ಅದು ಇದು ನೆಪ...  ನಡೆದುಕೊಂಡು ೫ಕೀ.ಮಿ ದೂರದ  ಅಂಬರಪದವು ಗುಡ್ಡದ ಶಿಖರದವರೆಗೂ ಹೋಗ್ತಾರೆ.
.


ಶೀತ ಜ್ವರಕ್ಕೆ ಇಂಗ್ಲೀಷ್ ಮದ್ದು ಅಗಲ್ಲ ಅದು ಕಹಿಯಂತೆ, ಆ ಕಾಳ್ ಜೀರಿಗೆ ಕಾಷಾಯ ೧೦ ಮುಕ್ಕುಲಿಯಾದ್ರೂ ಕುಡಿತ್ತಾರೆ, ಪೇರಲ ಕೊಡಿ, ಅಮೃತ ಬಳ್ಳಿ, ನೆಲ ನೆಲ್ಲಿ, ಕಟ್ರೆ ಗಿಡ ಅದು ಇದು ಹಾಕಿ ಎಷ್ಟು ಕೈಪೆ ಆದ್ರೂ ಬುಲ್ಕ ಅಂತ ಹೊಟ್ಟೆಗೆ ಹೋಗ್ತದೆ. 

 
ಅಂಗಡಿಯಾ ಬೇರೆ ತಿಂಡಿ ಕೊಟ್ಟರೆ ಹಲ್ಲಿಲ್ಲ ಅಂತರೆ, ಎಲೆ ಅಡಿಕೆ ಜಗಿದು ತಿನ್ನುತ್ತಾರೆ, ಚಕ್ಕುಲಿ ಕಟು ಕುಟು ಅಂತ ಶಬ್ದ ಬರ್ತದೆ. 

ಸಂಜೆ ಟಿವಿಯಲ್ಲಿ ಯಾವುದಾದರೂ ಚಲನಚಿತ್ರ ಗೀತೆ ಬಂದ್ರೆ ಇದೆಂಥ ಮರ್ಲು ನಲಿಕೆ, ರೇಡಿಯೋ ಕೇಳಿಸು ಮಂಗಳೂರು ಆಕಾಶವಾಣಿಯಲ್ಲಿ ಪಾರ್ದನ ಬರುತ್ತದೆ.  

ಚಂದದ ರೇಷ್ಮೆ ಸಾರಿ ಕೊಟ್ರೆ, ಇದು ಒಳ್ಳೆದಿಲ್ಲ, ಮಾಸಿ ಹೋಗಿದೆ,  ಸೊಂಟದಲ್ಲೇ ನಿಲ್ಲೋದಿಲ್ಲ !!

ಮನೆಗೆ ಕಂಬಳಿಯೋ, ಮಡಕೆಯೋ , ಮತ್ತಿನ್ನೆನ್ನೋ ಮಾರಿಕೊಂಡು ಬಂದರೆ, ಮನೆಯಲ್ಲಿ ಎಲ್ಲರೂ ಇದ್ರೂ .." ಮನೆಯಲ್ಲಿ ಯಾರಿಲ್ಲ ಮುಂದೆ ಹೋಗಿ " ಎಂತ ಸ್ವಾರ್ಥಿ ಅಜ್ಜಿ ... 


ಪ್ರಾಯಕ್ಕೆ ಬಂದವರನ್ನು ಮಾತನಾಡಿಸುತ್ತಾ ನನ್ನಜ್ಜಿ ಶುರು ಮಾಡುವುದೇ ಮದುವೆ ಆಗಿದೆಯಾ ?(ಮದಿಮೆ ಅತುಂಡ ?) ಅಂತ ಮತ್ತೆ ನನ್ನ ಕಡೆ ತಿರುಗಿ ೧೪ ವರ್ಷದಲ್ಲಿ ಇವನ ದೊಡ್ಡಪ್ಪ , ೧೬ ವರ್ಷದಲ್ಲಿ ಇವನ ೨ನೇ ದೊಡ್ಡಪ್ಪ ಮತ್ತೆ ಇವನಪ್ಪ ..... ಅಜ್ಜಿಗೆ, ಮಕ್ಕಳು , ಮದುವೆ , ಮೊಮ್ಮಕ್ಕಳ ಮದುವೆ ಇದೆ ಆಲೋಚನೆ ಎಂಚಿನ ಪಿರಿಪಿರಿ ಮಾರೆರೆ ..!!


ನನ್ನ ಅಜ್ಜಿಗೆ ಗಡಿಯಾರ ನೋಡಲು ಬರಲ್ಲಾ, ಅದರೂ ಬೆಳಗ್ಗೆ ಸೂರ್ಯನನ್ನೇ ಎಬ್ಬಿಸುತ್ತಾರೆ, ೧೦ ಗಂಟೆಗೆ ಚಾಯ ಕುಡಿತಾರೆ , ೧ ಗಂಟೆಗೆ ಊಟನೂ ಮಾಡ್ತಾರೆ , ಮತ್ತೆ ಸಂಜೆ ೪ ಗಂಟೆಗೆ ಬಯ್ಯಾ ತ ಚಾಯ ಕುಡಿತಾರೆ ನಂಗೆ ಮಾತ್ರ ಆಶ್ಚರ್ಯ ..... ಹೇಗೆ !!!!!

ಹೌದು ಬೆಳಗ್ಗೆ ನಮ್ಮ ಸೇಲಂ ಹುಂಜನ ಕೂಗಿಗೆ, ೧೦ ಗಂಟೆಗೆ ತುಳಸಿ ಕಟ್ಟೆಯ ನೆರಳಿಗೆ, ಮಧ್ಯಾನ ಪಲ್ಲಿಯಲ್ಲಾಗುವ ಬಾಂಗಿಗೆ, ಸಂಜೆ ಮಾಡಿನ ನೆರಳಿಗೆ. 


ಆಧುನಿಕ ಪ್ರಪಂಚದ ಧಾವಂತಗಳು ಮನುಷ್ಯಸಹಜ ಭಾವನೆಗಳನ್ನು, ಸಂಬಂಧಗಳನ್ನು, ಸಂಭ್ರಮಿಸುವ ಮನಸ್ಸುಗಳನ್ನು, ಬಾಲ್ಯದ ಸುಂದರ ಅನುಭೂತಿಯನ್ನು ನಮ್ಮಿಂದ ಅನಾಮತ್ತಾಗಿ ಕಸಿದುಕೊಂಡುಬಿಟ್ಟಿವೆ. ಹಣ ಗಳಿಸುವ ಅನಿವಾರ‌್ಯತೆಯ ಮುಂದೆ ಬೇರೆಲ್ಲ ಸಂತಸಗಳನ್ನೂ ನಾವೇ ಗೌಣವಾಗಿಸಿಕೊಂಡಿದ್ದೇವೆ. ದಿನನಿತ್ಯದ ಗಡಿಬಿಡಿಯ ಬದುಕು, ಇಷ್ಟವಿಲ್ಲದಿದ್ದರೂ ಅನಿವಾರ‌್ಯವಾಗಿ ಮಾಡಬೇಕಾದ ಕೆಲಸಗಳು ಎಲ್ಲವೂ ಸೇರಿ ನಮ್ಮೊಳಗಿನ ಮನುಷ್ಯತನದ ಮೂಲಸತ್ವವನ್ನೇ ನಿರ್ಜೀವಗೊಳಿಸಿವೆ. ಎಲ್ಲೋ ಮಗುವೊಂದು ತುಂಟಾಟ ಮಾಡಿದಾಗ, ಅಜ್ಜ-ಅಜ್ಜಿಯರು ಬೊಚ್ಚು ಬಾಯಿಯಲ್ಲಿ ನಕ್ಕಾಗ ಅರಿವಿಲ್ಲದ ಸಂತಸವೊಂದು ಮನಸ್ಸಲ್ಲಿ ಹುಟ್ಟಿಕೊಂಡು ಬಾಲ್ಯದ ಸುವರ್ಣ ಯುಗವನ್ನು ಕಣ್ಮುಂದೆ ತರುತ್ತದೆ. ಮರೆಯಲ್ಲೇ ವಿಷಾದದ ಕಾರ‌್ಮೋಡವೂ ಸುತ್ತುವರಿಯುತ್ತದೆ.

ಅಜ್ಜ-ಅಜ್ಜಿ ಎಂಬ ಹಳೆ ತಲೆಮಾರು ಮತ್ತು ಮೊಮ್ಮಕ್ಕಳೆಂಬ ಹೊಸ ತಲೆಮಾರಿನ ನಡುವೆ ಅಕ್ಕರೆಯ ಬೆಸುಗೆಯೊಂದು ಬೆಸೆವ ಸಮಯ ಅದು. ಹಳೆ ಬೇರಿನ ಸತ್ವಗಳನ್ನೆಲ್ಲ ಹೊಸ ಚಿಗುರು ಹೀರಿಕೊಳ್ಳುವುದಕ್ಕಿರುವ ಸದವಕಾಶ ಅದು. ಶಾಲೆಯ ಮೆಟ್ಟಿಲನ್ನೂ ಹತ್ತದ ಅಜ್ಜ-ಅಜ್ಜಿಯರು ಬದುಕಿನ ಅನುಭವದಿಂದಲೇ ಪಡೆದ ಡಾಕ್ಟರೇಟ್ ಪದವಿಯನ್ನು ಕಂಡು ಮೊಮ್ಮಕ್ಕಳು ಕಣ್ಣರಳಿಸುವ ಸಮಯ ಅದು. ಮೊಮ್ಮಕ್ಕಳ ಪ್ರತಿ ಚೇಷ್ಟೆಯನ್ನೂ ಸಹಿಸಿಕೊಂಡು, ಅವರ ಬಯಕೆಗಳನ್ನೆಲ್ಲ ಈಡೇರಿಸುತ್ತಾ, ಎಪ್ಪತ್ತು-ಎಂಬತ್ತರಲ್ಲೂ ಹುಡುಗುತನದ ಸಂಭ್ರಮವನ್ನು ಅನುಭವಿಸುವ ಅಜ್ಜ-ಅಜ್ಜಿ ಎಂಬ ಪಾತ್ರಕ್ಕೆ ಮೊಮ್ಮಕ್ಕಳ ಮನಸ್ಸಿನಲ್ಲಿ ಆತ್ಮೀಯತೆ ತುಂಬಿದ ಗೌರವದ ಸ್ಥಾನ ಎಂದೆಂದಿಗೂ ಇರುತ್ತದೆ. 

ಕುಸಲ್

* ಇರೆನ್ ದೆಪ್ಪೊಡ ಅತ್ತ್ ಅಲೆನ್ ಕೊರ್ಪರಾ
(ಭಟ್ರೇ ಇಲ್ಲಡೆ ಪೋಯಿ ಬೇತೆ ಜಾತಿತಾಯೆ ವನಸ್ ಅಯಿಬುಕ್ಕ ಇಂಚ ಪಂಡೆಗೆ)


ತುಳು ಪದೋ - ಕೈ

ಕೈಲ್, ಕೈಮರಾಯಿ, ಕೈಕಂಜಿ, ಕೈಯಾಟೊ, ಕೈಬಾಯಿ, ಕೈತಾಟಿ, ಕೈಕೋಲು, ಕೈವೀಸೊ, ಕೈ ಪಾಡ್, ಕೈಪತ್ತಪುನ, ಕೈ ಕಿನ್ನಿ, ಕೈ ಕೊಟ್ಟು , ಕೈ ಸಾಲ , ಕೈ ಭಾಷೆ, ಕೈ ಪಾತೆರ , ಕೈ ಕಾರ್ , ಕೈ ಚೀಲ , ಕೈ ಕೋಲ , ಕೈ ಕುಡರಿ , ಕೈ ತಾಂಗ್ , ಕೈ ಕೈ, ಕೈ ಮಾಸ್, ಕೈಕಾರ, ಕೈ ಪತ್ತವನು, ಕೈ ದಾರೆ, ಕೈ ಕುಞಿ, ಕೈ ತೋಡು, ಮೇಲ್ ಕೈ, ಗೇಲ್ ಕೈ, ಕೈಲಾಸ, ಕೈ ತುತ್ತು, ಕೈಕಂಬ, ಕೈದ್, ಕೈಲ್, ಕೈಪು, ಕೈಪೆ, ಕೈಸೆಟ್ಟಿ, ಕೈ ಪೇತ್, ಕೈ ಬೇವು, ಕೈಸಾಲೆ, ಕೈ ಬಿತ್ತ್, ಕೈ ಜಾರು, ಕೈ ಮೇಲ್, ಕೈತಲ್, ಕೈ ಮರಯಿ, ಕೈಮರ, ಕೈ ಬಿರೆಲ್, ಕೈಪ್ಪುರ, ಕೈಮೋನೆ, ಕೈನಾಲಾಯಿ, ಕೈ ಪೊಲ್ಲಿಗೆ, ಕೈತ್ತಲ್, ಕೈದ್, ಕೈಗುಣ

ತುಳು ವಿಕಿಪೀಡಿಯಾ

ತುಳು ವಿಕಿಪೀಡಿಯ ಒಂಜಿ ತುಳುವೆರೆನ್, ತುಳುವ  ಸಂಸ್ಕೃತಿ, ತುಳು ನೆಲೆ ಬಿಲೆನ್, ಪೊರ್ಲ ಪೊಲಿಕೆನ್ ಪಿದಾಯಿಬಲೆಕ್ ಪಟ್ಟುನವು. ಮುಲ್ಪ ಏರ್ ಬೋಡಾಂಡಲ ಬರೆವೊಲಿ, ಅಂಡ ಅವು ಒಂಜಿ ವಿಕಿತಾ ರೀತಿ ನಿತಿಡ್ ಇಪ್ಪೊಡು

Wednesday, October 18, 2017

ಒಂದು ತೊಟ್ಟೆಯ ಕತೆ

ನನ್ನ ಮಾವ ತಮ್ಮ ಜಾಗದ  ವಲಚ್ಚಿಲ್ನ ಒಳಗೆ ಮರ ಗೆಣಸುಗಳನ್ನು ತಿಂದು ಮುಗಿಸುತಿದ್ದ ಹೆಗ್ಗಣಗಳನ್ನೂ ಹಿಡಿಯಲು ಅಲಲ್ಲಿ ಅಡೆಂಚಿಲ್  ಇಡುತ್ತಿದ್ದರು. ಅದಕ್ಕಾಗಿ ಅಕ್ಕಿಯೋ, ಗೋಧಿಯ ಕಾಳುಗಳನ್ನೋ ಪುಟ್ಟ ಚಿಪ್ಪಿಯಲ್ಲಿಟ್ಟು ಒಂದು  ತೊಟ್ಟೆಯಲ್ಲಿ ಕಟ್ಟಿ ಜೋಪಾನ ಮಾಡುತಿದ್ದರು . ಯಾಕೆಂದರೆ ಮುಂಜಾವಿನ ಮಂಜಿನ ಹನಿಗಳಿಗೆ ಗೋಧಿ ನಾನಿ ಬಿಸಾಡುವುದು ಬೇಡವೆಂದು, ತರಕಾರಿ ಬೆಳೆಸಿದ ಮಜಲಿನಲ್ಲಿ  ತರಕಾರಿ  ನಿನೆಗಳನ್ನು  ತಿನ್ನಲು ಬರುತಿದ್ದ ಹಕ್ಕಿಗಳ ಉಪಟಳ ತಡೆಯಲು ಮಾವ  ಮುಡ್ಕನೆ ಇಟ್ಟು  ಮುಡ್ಕನೆಗೆ ಕಟ್ಟುವ  ಪಕ್ಕಿಕೇನೆ ಹಣ್ಣಿನ  ಅರ್ಧದವರೆಗೆ ಮಾತ್ರ  ಲಕೋಟೆ ಕಟ್ಟುತ್ತಿದ್ದರು, ಎಲ್ಲ ಕೇನೆಯನ್ನು ಒಂದೇ ಹಕ್ಕಿ ತಿಂದು ತೇಗುವುದು ಬೇಡವೆಂದು ಮಾವನು ಕುರೆ ಕಟ್ಟಿ ಉಳಿಸುವುದು. ಹಕ್ಕಿಗಳ ಹಿಂಡುಗಳನ್ನು ಬೆದರಿಸಲು ಅಲ್ಲಲ್ಲಿ ಬೆದರು ಬೊಂಬೆಯ ಬದಲಾಗಿ ಮಿಂಕೋಟೆ ತೊಟ್ಟೆಗಳನ್ನು, ಬೆದರು ತೊಟ್ಟೆಗಳನ್ನು ತೂಗು ಹಾಕುತಿದ್ದರು. ಇನ್ನು ಹಲಸಿನ ಸೀಸನ್ನಲ್ಲಿ ಹಪ್ಪಳ ಒತ್ತಲು ಗೋಲಾಕಾರದ ಪಾರದರ್ಶಕ   ತೊಟ್ಟೆಯನ್ನೇ ಬಳಸುವುದುಇದೆಲ್ಲ ನಮ್ಮ ಮಾವನ ತೊಟ್ಟೆ ಕತೆ.

ಮತ್ತೆ ನಮ್ಮ ಹಳೆ ಟೇಪ್ ರೆಕಾರ್ಡ್ನನ ಕ್ಯಾಸೆಟಿನ  ರೀಲ್, ರೀಲಿನ ಎರಡು ಕಡೆ ಕಲ್ಲುಗಳನ್ನೂ ಕಟ್ಟಿ ರೊಯ್ಯೆಂದು ಮೇಲೆ ಎಸೆದು ಎರಡು ಮರಗಳಿಗೆ ಸಂದು ಹಾಕುವಂತೆ ಮಾಡಿ, ಅದು ಮುಸ್ಸಂಜೆಯ ಬಾಡಿದ ಬೆಳಕಿಗೆ  ಮಿನುಗುವ ಚಂದ ನೋಡುವುದು, ವೇಗವಾಗಿ ಬೀಸುವ ಗಾಳಿಗೆ ರೀಲ್  ಸುಯ್ಯೇ ಸುಯ್ಯಿ ಎಂದು ಬುಸುಗುಟ್ಟುವ ಹಾವಿನ ಶಬ್ದಉಂಟಾದಾಗ ಅಮ್ಮನಿಂದ ಬೈಗುಳ ಕೇಳಿಸುವುದುಕಾಗದ ಉರುಂಡೆ ಮಾಡಿ, ಸಣ್ಣ ಉರುಂಟು ಕಲ್ಲುನ್ನು ತುಂಬಿ ಹೊರಗೆ ಲಕೋಟೆ ಕಟ್ಟಿ, ಚೆಂಡಟಾ ಆಡಿದ್ದು  ಇದು ಮೊದ ಮೊದಲು ತೊಟ್ಟೆ ಬಳಸಿ  ಆಡಿದ ಆಟಗಳು. ಇವು ನಾನು  ಮೊದಲು ಕಂಡ ತೊಟ್ಟೆಯ ವಿಷ್ಯ ಹಾಗೂ ತೊಟ್ಟೆಯ ಆಟಗಳು ... ಇನ್ನೂ ಇತ್ತೀಚಿನ ವರೆಗೆ ಮದುವೆಗಳಲ್ಲಿ ಮಿಂಕೋಟೆ ಲಕೋಟೆಗಳ  ಅಲಂಕಾರ ಮಾಡುತ್ತಿದ್ದರೆ, ದಿಕ್ಕೆಲಿನ ಮೂಲೆಯಲ್ಲಿ ಅಡಿಕೆ ಹಾಲೆಯ ಮೂಡೆಯಲ್ಲಿ   ಕಟ್ಟಿಡುತಿದ್ದ ಲುಂಗೆಲ್  ಮೀನನ್ನು ಕಾಗದದಲ್ಲಿ ಕಟ್ಟಿ ಲಕೋಟೆಯಲ್ಲೇ ಕಟ್ಟುತ್ತಿದದ್ದು ನನ್ನಮ್ಮ , ನಮ್ಮಚಿಕ್ಕಪ್ಪ ತೋಡಿನ ಏಡಿ ಹಿಡಿಯಲು ಮನೆಗೆ ತಂದ ಮೀನಿನ ಪೊಟ್ಟೆಯನ್ನು ತೊಟ್ಟೆಯಲ್ಲಿ ಕಟ್ಟಿ ತೋಡಿನ ಸವಾಕಾಶ ಜಾಗದಲ್ಲಿ ಅಲ್ಲಲ್ಲಿ ಒಂದು ಸಾದ ಗಾತ್ರದ ಕಲ್ಲುಗಳ ಕೆಳಗಿಟ್ಟು ಒಂದೆರಡು ಗಂಟೆಗಳ ನಂತರ ಡೆಂಜಿ ಬೋಂಟೆಗೆ ಹೋಗುವುದು ಆಗಾಗ ನಡೆಯುತ್ತದೆ.

ಆಗಿಂದಾಗ್ಗೆ  ತೊಟ್ಟೆ ಎಂದ ಕೂಡಲೇ ನೆಂಪಾಗುವುದು  ತೊಟ್ಟೆ ಸಾರಾಯಿಇದನ್ನು ಕರಾವಳಿಯಲ್ಲಿ ತೊಟ್ಟೆ ಅಂತಲೇ ನಾಮ ವಿಶೇಷಣದಿಂದ ಹೆಸರಿಸಲಾಗಿತ್ತುನಮ್ಮ ಅಜ್ಜ ಬೇಗನೆ ಗೊಟಕ್  ಅಂದದ್ದು ತೊಟ್ಟೆಯ ಹಠಾತ್  ಮುಷ್ಕರದ ಬಂದ್ನಿಂದಾಗಿ ಎಂಬುದು ಸತ್ಯ. ಹೌದು ಸುಮಾರು ೮೫ ವರ್ಷದ ನನ್ನಜ್ಜ ಸೂರ್ಯನ ಬೆಳಕನ್ನೇ ಗಂಟೆ ಮಾಡಿ ಸಂಜೆ ಆಗುವಾಗ ಗಡಂಗಿನ ಎದುರು ದಿನದ ಹಾಜರಿ  ಹಾಕುತ್ತಿದ್ದರು. ಯಾವಾಗಲು ಬಾಗಿ ನಡೆಯುತ್ತಿದ್ದ ನಮ್ಮಜ್ಜನೊಳಗೆ  ತೊಟ್ಟೆ  ಸೇರಿದರೆ ಸರಿ ಸುಮಾರು  ಸರ್ತವಾಗಿಯೇ ಕೈ ಹಿಂದೆ ಕಟ್ಟಿಕೊಂಡು  ನಡೆಯುತ್ತಿದ್ದರು. ಹೀಗೆ ನನ್ನಜ್ಜನಂತೆ ನನ್ನೂರ ಹಲವು ತೊಟ್ಟೆ ಪ್ರಿಯರು ಬಾರದ ಊರಿಗೆ ಕಳೆದು ಹೋಗಿದ್ದಾರೆ.

ತಮಗೂ ಗೊತ್ತಿರಬಹುದು ಪ್ಲಾಸ್ಟಿಕ್ ಸುಟ್ಟರೆ ಅದರಿಂದಾಗಿ ಹಲವು  ಅನಿಲಗಳು  ಉತ್ಪತ್ತಿಯಾಗುತ್ತವೆ ಎಂದು, ನಮ್ಮ ಸಮಾರಂಭಗಳಲ್ಲಿ ಅಡುಗೆ ಭಟ್ರು ಪಪ್ಪಡ ಕಾಯಿಸಿ ಅದರ ಹೊರಕವಚ ಪ್ಲಾಸ್ಟಿಕ್ ತೊಟ್ಟೆಯನ್ನು ಒಲೆಗೆ ಹಾಕುತ್ತಾರಲ್ವಾ, ಇಲ್ಲಿ ಪಪ್ಪಡಕ್ಕೆ ಹಾಕಿದ ಉಪ್ಪಿನಂಶ (Chlorine Compound) ಪ್ಲಾಸ್ಟಿಕ್ ನೊಂದಿಗೆ ವರ್ತಿಸಿ ಅಡುಗೆಮನೆಯಲ್ಲೇ ಡಯಾಕ್ಸಿನ್  ಅನಿಲ ತಯಾರಾಗುತ್ತದೆ ಅನಿಲವನ್ನು ಅಮೇರಿಕ ಸೋತು ಹೋದ  ಏಕೈಕ  ಯುದ್ಧ  ವಿಯೆಟ್ನಾಂ ಯುದ್ಧ  1961 - 1971ರಲ್ಲಿ ಬಳಸಿತ್ತುಇದರಿಂದಾಗಿ ನೂರಾರು ಎಕರೆ ಸಸ್ಯಜನ್ಯ ನಾಶವಾಗಿತ್ತುಬಗೆಬಗೆಯ ಕಾಯಿಲೆಗಳಿಗೆ ನಾಂದಿಯಾಗಿತ್ತಂತೆಆವಾಗಿನ ಕಾಲದಲ್ಲೇ ವಿಷ ಅನಿಲವಾಗಿವಾಗಿ ಬಳಸಿದ್ದರು. ಇದೇ ಅನಿಲ ನಾವು ತೋಟಕ್ಕೆ ನೀರು ಸರಬರಾಜಿಗೆ ಬಳಸುವ PVC ಕೊಳವೆಗಳನ್ನು ಉರಿಸಿದ್ರು ಉತ್ಪತ್ತಿಯಾಗುತ್ತದೆಮತ್ತೆ ತಾವು ನೋಡಿರಬಹುದು ಜಾತ್ರೆಯಂದು ಬಿಡುವ ಕದಿನ, ಅಲ್ಲಿ ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಪಟಾಕಿಗಳಲ್ಲಿ ಬಳಸುವ ನೀಲಿಗಾಗಿ ತಾಮ್ರ, ಹಸಿರಿಗಾಗಿ ಬೇರಿಯಂ, ಕೆಂಪಿಗಾಗಿ ಕ್ರೋಮಿಯಂ ಬಳಸುತ್ತಾರೆನಾವು ದಿನ ಬಳಸುವ ತೆಳು ತೊಟ್ಟೆ, ಅದರಲ್ಲಿ ತರುವ ಮೊಸರು, ತಿಂಡಿ, ಸಾಂಬಾರು, ತರಕಾರಿಗಳ ಮೂಲಕ ದೇಹವನ್ನು ಸುಲಭವಾಗಿ ಸೇರಿಕೊಳ್ಳುತ್ತದೆ. ಇವೆಲ್ಲದುದರಿಂದಾಗಿ   ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಭಾಗವಾಗಿರುವುದು ಆಮಿಷವಂತೂ ಅಲ್ಲಅದು ವಿಷವೇ.


                                           


ಆದುದರಿಂದ ಕಳಕಳಿ ಇಷ್ಟೇ "ಪ್ರಕೃತಿ ಮಾತೆಯು  ನಮ್ಮ ಮಾರ್ಗದರ್ಶಕಿ, ನಮ್ಮ ಶುಶ್ರೂಷೆ ಮಾಡುವ ದಾದಿ ಹಾಗೂ ನಮ್ಮ ಸೃಷ್ಟಿಗೂ ಕಾರಣಳು" ಎಂಬ ಆಂಗ್ಲ ಕವಿ ವರ್ಡ್ಸವರ್ತನ  ಮಾತನ್ನು ಅನುಮೋದಿಸಿ, ವಿಷ್ಣು ಪತ್ನಿ ಎಂದು ಆರಾಧಿಸುವ ಭೂಮಿ ತಾಯಿಗೆ, ಶುದ್ಧ ಆಮ್ಲಜನಕ ನೀಡುವ ಪರಿಸರಕ್ಕೆ ಪ್ಲಾಸ್ಟಿಕಿನ ಕೊಡುಗೆಯನ್ನು ಕಮ್ಮಿ ಮಾಡೋಣಬದಲಾಗಿ ಅಪ್ಪನ ಜೋಂಬ್ಲಸ್ ಪ್ಯಾಂಟಿನ ಕಾಲು ಕತ್ತರಿಸಿ ಒಂದು ಕಡೆ ಹೊಲಿದು ಮಗದೊಂದು ಕಡೆ ಲಾಡಿ ಸಿಕ್ಕಿಸಿದರೆ ನಮ್ಮ ಕೈಚೀಲ ಸಿದ್ಧವಾಗುತ್ತದೆಸ್ವಲ್ಪ ಅಂತರ್ಮುಖಿಗಳಾಗಿ ಜಿಜ್ಞಾಸೆ ಮಾಡಿ ತೊಟ್ಟೆಗೆ ವಿದಾಯ ಹೇಳೋಣ, ಸಂಗೀಸು, ಬಟ್ಟೆ ಚೀಲಗಳನ್ನು ಬಳಸೋಣ, ನಾವು ತೊಟ್ಟೆಗಳ ದಾಸರಾಗದಿರೋಣ ಏನಂತೀರಿ... !!!!

Thursday, August 3, 2017

ಗಡ್ಡದ ವಿಷ್ಯ

ಹೌದು ಇದು  ಗಡ್ಡದ ವಿಷ್ಯ,  ಹರೆಯಕ್ಕೆ ಬಂದಾಗ ಸಹಜವಾಗಿ ಫಲವತ್ತಾದ ಮೊಗದಲ್ಲಿ ಹುಲುಸಾಗಿ ಬೆಳೆಯುವ ಹುಲ್ಲುಗಳೆಂಬ   ಕೂದಲಿಗೆ ಅದೇನೋ ಪ್ರಚಾರ ಪ್ರಿಯತೆ ಗೊತ್ತಿಲ್ಲ, ಪ್ರತಿ ದಿನ ಗಡ್ಡ ತೆಗೆದರೆ ರಸಿಕನಾದರೆ, ತೆಗೆಯದೆ ಇದ್ದರೆ ಸನ್ಯಾಸಿ. ಹಲವರು ಇದರ ಬಗೆಗೆ ನಯವಾಗಿ ಪ್ರತಿಭಟಿಸುವವರೇ...ಇಲ್ಲಿ ನನ್ನ ದೇಹಕ್ಕೆ ಕಂತುವುದಲ್ಲ ಹಲವರ ಕಣ್ಣು ಗಳಿಗೆ ಚುಚ್ಚುವುದು, ಸಾಮಾಜಿಕ ನೆಲೆಯಲ್ಲಿ ಪ್ರಮುಖವಾದ   ಗಡ್ಡ,  ಸಭ್ಯ, ಸಂಸ್ಕಾರವೆನ್ನುವ ಸಮಾಜದಲ್ಲಿ ಕುಹಕವಾಗಿಯೇ ಆಡಿಕೊಳ್ಳುತ್ತಾರೆ

ತನ್ನಷ್ಟಕ್ಕೆ ಬೆಳೆದ ಗಡ್ಡದ  ಬಗೆಗೆ ನಾನು ಆಲೋಚಿಸಿದ್ದೇ ಕಡಿಮೆ. ಯಾವುದಾದರೂ ಸಮಾರಂಭಕ್ಕೋ, ಗಮ್ಮತಿಗೆ, ಯಾರದೋ ಸಮ್ಮಾನಕ್ಕೋ ಹೋದಾಗ ಪರಿಚಯವಿಲ್ಲದ ಮುಖಗಳು  ಕೇಳುವುದು ಯಾರಾತ  ಗಡ್ಡದ ಹುಡುಗ? ಎಂದು ಅದೆಷ್ಟೋ ಸಲ ಮಾತಾನಾಡಿಸಿದ್ದು ಇದೆ, ಮನೆ ಎಲ್ಲಿ ಯಾರ ಮಗಏನು ಓದುವುದುಏನು ಉದ್ಯೋಗ ಎಂದು ಜನಗಣತಿಯ ಟೀಚರ್  ಕೇಳುವಂತೆ ಸಾಲು ಸಾಲು ಪ್ರಶ್ನೆಗಳ ಮೆರವಣಿಗೆಯು ಅನುಭವವಾದದಿದೆ , ಸಹಜವಾಗಿ ಬೆಳೆದ ಗಡ್ಡದ ಬಗೆಗೆ, ಗಡ್ಡದಲ್ಲೇ ಪ್ರಶ್ನಿಸಬೇಕೇ ? ಹೊರತು ನನ್ನನೇಕೆ ಅಪರಾಧಿ ಮಾಡುತ್ತಾರೆ ಎಂದು ಆಗಾಗ ಮನಸಲ್ಲೇ ಪ್ರಶ್ನಿಸಿದ್ದು ಇದೆ.  ಮತ್ತೊಂದು ವ್ಯತಿರಿಕ್ತ ಅಂದರೆ  ನಮ್ಮ ಮನೆಯಲ್ಲಿ ಗಡ್ಡ ಬಿಡುವುದಕ್ಕೆ, ತೆಗೆಯುವುದ್ದಕ್ಕೆ  ಚಕ್ಕಾರವಿಲ್ಲದಿದ್ದರೂ, ಊರಿನವರಿಗೆ, ಅತ್ತಿಗೆಯಂದಿರಿಗೆ, ಸಂಬಂಧಿಗಳಿಗೆ, ಸೋದರ ಅತ್ತೆಯಂದಿರಿಗೆ, ಶಾಲಾ ಟೀಚರ್ಗೆನಮ್ಮ ಕಾಲೇಜು ಪ್ರಾಂಶುಪಾಲರಿಗೆ,  ಕಡೆಗೆ ದಾರಿ ಹೋಕರಿಗೂ  ಗಡ್ಡ ಚರ್ಚೆಯ ವಿಸ್ಯವೇ, ನಿನಗೆ ಗಡ್ಡ ಚಂದ ಕಾಣೋದಿಲ್ಲ, ನಿನ್ನದು ಕೋಲು ಮುಖ ಹಾಗಾಗಿ ಗಡ್ಡ ಇಲ್ಲದಿದ್ರೆ ಚಂದ ಬ್ಯಾರಿ ಅಬೂಬಕರೇ ಮಗನ  ಹಾಗೆ ಕಾಣ್ತಿಯಾ, ವಿಶೇಷ ಕಾರ್ಯಕ್ರಮಕ್ಕೆ ಹೋದರೆ ಮುಕ್ರಿ  ಬಂದ ನೋಡಿ ಕೋಳಿ ಕೊಡಿ ಎಂದು ಕೂಹಕವಾಡಿದ್ದು  ಇದೆ, ಮಗಳಿರುವ ದೂರದಿಂದ ಮಾವ ಆಗುವವರೊಬ್ಬರು  ಗಡ್ಡ ಇಡುವುದು ನಮ್ಮ ಸಂಸ್ಕಾರ ಅಲ್ಲ ಆಲ್ವಾ? ಎಂದು  ತನ್ನ ಮಗಳಿಗೆ ಈತ ವರನಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮುನ್ಸೂಚನೆ ನೀಡಿದ್ದು ಇದೆ. ನನ್ನೂರ ಬ್ಯಾರಿಗಳ ಮೊಬೈಲ್  ಅಂಗಡಿಯಲ್ಲಿ , ಚಪ್ಪಲಿ ಅಂಗಡಿಗಳಲ್ಲಿ ಬ್ಯಾರಿ ಭಾಷೆಯಲ್ಲೇ ಮಾತಾನಾಡಿಸಿ, ನನ್ನನ್ನೂ ತಾತ್ಕಾಲಿಕ ಬ್ಯಾರಿ  ಮಾಡಿಸಿವ್ಯಾಪಾರ ಕುದುರಿಸಿದ್ದು ಇದೆ. ಮತ್ತೆ ಬ್ಯಾರ್ತಿ ಹುಡುಗಿ ನಕ್ಕದು ಇದೆ

ಗಡ್ಡದಲ್ಲೂ ಹಲವು ವಿಧವಿದೆ ಕೈಯಾಡಿಸಿದರೆ ಕಂತಿದರೆ ಅದು ಪೊಕ್ರಿ ಗಡ್ಡ, ಅದೆಲ್ಲೋ ಮೂಲೆಯಲ್ಲಿ ಒಂದು ನಾಕು ಕೂದಲು ಬೆಳೆದರೆ ಹೋತ ಗಡ್ಡ, ಸಾಧಾರಣ ಉದ್ದವಿದ್ದರೆ ಹೆಂಡತಿ ಗರ್ಭಿಣಿಯೋ ಎಂಬ ಗಡ್ಡ, ಮತ್ತಷ್ಟು ಮುಖ ತುಂಬಾ ದಪ್ಪವಾಗಿದ್ದರೆ ಏನು ಹುಡುಗನಿಗೆ ಹುಷಾರಿಲ್ವಾ? ಎಂಬಾ ಗಡ್ಡ. ಒಟ್ಟಾರೆ ಅಪರಾಧಿ,  ಗಡ್ಡವಂತೂ ಸತ್ಯ. ಹಲವು ಬಾರಿ ಅತ್ತಿಗೆಯಂದಿರ ಬಾಯಿ ಮುಚ್ಚಿಸಿದ್ದು ಇದೆ. ತಮಗೆ ಗಡ್ಡ ಬರುವುದಿಲ್ಲವೆಂದು ನಂಜಿ ಕಾರುವುದು ಅಲ್ವೇ? ಎಂದು ಕೇಳಿ  ಮತ್ತೆಂದೂ ನನ್ನ ಗಡ್ಡದ ಬಗೆಗೆ ಪ್ರಶ್ನಿಸದ ಹಾಗೆ ಮಾಡಿದಿದೆ. ಅವರಿಗೆ ವಿಷಯ ಗೊತ್ತಿಲ್ಲ, ದಿನಚರಿಯ ಹಲವು ನಿಮಿಷಗಳು ಉಳಿಯುತ್ತವೆಯೆಂದು, ಮೊಗದ ಸೌಂದರ್ಯ ಕಾಪಾಡುತ್ತದೆಯೆಂದು, ಮುಖವೂ ತೇವವಾಗಿಡುತ್ತದೆಯೆಂದು, ಜೊತೆಗೆ ಮೊಡವೆಗಳು ಕಾಣಿಸುವುದಿಲ್ಲವೆಂಬ ಸತ್ಯಗಳು. ಗಡ್ಡ ತೆಗೆದ ಗದ್ದ ಅದೇನು ಸುಂದರ ಗೊತ್ತಿಲ್ಲ ಕಲಾಯಿ ಹಾಕದ ಕಿಜಿಯ ಪಾತ್ರೆಯಂತೆ ಚುರುಪು ಚುರುಪು ಗಡ್ಡದ ಮಾಸಿದ ಚುಕ್ಕಿಗಳ ಸಶೇಷವಲ್ಲದ ಬಿಂಬ ಮಾತ್ರ ಸತ್ಯ

ತಮಗೂ ಗೊತ್ತಿರಬಹುದು ಕರಿಯ ಜನಾಂಗದ ಪ್ರಥಮ ಮತ್ತು ಅಮೆರಿಕದ 16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ಗಡ್ಡ 
ಇಡುತ್ತಿದ್ದರು. ಅವರದೇಲ್ಲ ಭಾವಚಿತ್ರಗಳಲ್ಲಿ ನೋಡಬಹುದು. ನೀವೇನಾದ್ರು ಪ್ರೀತಿಪ್ರೇಮ ವೈಫಲ್ಯ ಇದ್ದಿರಬೇಕು ಎಂದುಕೊಂಡರೆ  ಅದು ಸುಳ್ಳು  ಅಚ್ಚರಿ ಎಂದರೆ ಅವರು ಗಡ್ಡ ಬಿಡಲು ಪ್ರೇರಣೆ ನೀಡಿದ್ದು  11 ಹರೆಯದ ಪೋರಿಯೊಬ್ಬಳ ಪತ್ರವಂತೆ. 1860 ಅಕ್ಟೋಬರ್‌, ಆಗಷ್ಟೆ ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆನಡೆಯುವುದರಲ್ಲಿತ್ತುರಿಪಬ್ಲಿಕನ್‌ ಪಕ್ಷದಿಂದ ಲಿಂಕನ್ಅಧ್ಯಕ್ಷೀಯ ಅಭ್ಯರ್ಥಿಯಾಗಿ ಘೋಷಣೆಯಾಗಿತ್ತು. ಅದೇ ಸಮಯಕ್ಕೆ  ನ್ಯೂಯಾರ್ಕ್ ವೆಸ್ಟ್  ಫೀಲ್ಡ್ನಿಂದ ಗ್ರೇಸ್ಬೆಡೆಲ್ಸ್ಎಂಬ 11 ವರ್ಷದ ಪುಟಾಣಿ ಬರೆದ ಪತ್ರ ಭವಿಷ್ಯದ ಅಧ್ಯಕ್ಷನಾಗಲು ಕನಸು ಹೆಣೆಯುತಿದ್ದ  ಅಬ್ರಹಾಂ ಲಿಂಕನ್ ಕೈ ಸೇರಿತ್ತು. ಅದರಲ್ಲಿ ನಾನು 11 ವರ್ಷದ ಬಾಲಕಿಯಾಗಿದ್ದು, ನೀವೇ ದೇಶದ ಅಧ್ಯಕ್ಷರಾಗಬೇಕೆಂದು ನಾನು ಬಯಸಿದ್ದೇನೆ. ನಾನೇನಾದರು ಹುಡುಗನಾಗಿದ್ದರೆ ನಿಮಗೆ ಓಟ್ಮಾಡಬಹುದಿತ್ತೇನೋ ಆದಗ್ಯೂ  ನನಗೆ ನಾಲ್ಕು ಮಂದಿ ಅಣ್ಣಂದಿರಿದ್ದು, ಅವರೆಲ್ಲರೂ ನಿಮಗೆ ಓಟ್ಮಾಡುವಂತೆ ಕೇಳುತ್ತೇನೆ. ಆದರೆ ಇದಕ್ಕೊಂದು ಷರತ್ತು. ನಿಮ್ಮ ಮುಖ ತುಂಬಾನೆ ಸಣಕಾಲಾಗಿದ್ದು ನೀವು ಗಡ್ಡ ಮೀಸೆ ಬಿಡುವುದು ಉತ್ತಮ. ಗಡ್ಡ ಬಿಡುವ ಗಂಡಸರನ್ನು ಕಂಡರೆ ಮಹಿಳೆಯರು ಆಕರ್ಷಿತರಾಗುತ್ತಾರಂತೆ. ಆಗ ಅವರ ಗಂಡಂದಿರಿಗೆ ನಿಮಗೆ ಓಟು ಹಾಕುವಂತೆ ಒತ್ತಾಯಿಸುತ್ತಾರೆ ಹಾಗೂ ತಾವು ನಮ್ಮ ಅಧ್ಯಕ್ಷರಾಗುತ್ತೀರಿ  ಎಂದು ಬರೆದಿತ್ತು.   ಪುಟಾಣಿಯ ಬಯಕೆಯಂತೇ ಗಡ್ಡ ಬಿಡುತ್ತೇನೆ ಎಂದು ಲಿಂಕನ್‌  ಹೇಳಿಕೊಂಡಿದ್ದರಂತೆ, ಹಾಗೂ ಜೀವನ ಪೂರ್ತಿ ಗಡ್ಡಧಾರಿಯೇ ಆಗಿದ್ದರು
ಹೌದು ವ್ಯಕ್ತಿಯೊಬ್ಬನ ಗಡ್ಡ ಅವನ ತುಂಟ ಮುಗುಳ್ನಗೆಯನ್ನುಮುತ್ತುಕೊಡುವ ತುಟಿಗಳನ್ನು ಅಡಗಿಸಲು ಬಹುದು, ಆದರೆ ಆತನ ವ್ಯಕ್ತಿತ್ವ, ನಿಲುವು, ಜಾಣ್ಮೆಯನಲ್ಲ,   ಅವನು ಅವನೇ.. ಬದಲಾದ್ದು ನಮ್ಮ ನೋಟ ಅಷ್ಟೇ.... ಬಿಳಿ ತೊಗಲು ಚಂದ, ತಲೆಕೂದಲು ಇಲ್ಲದವನು ಅಂದವಿಲ್ಲ, ಗಡ್ಡಬಿಟ್ಟವರೆಲ್ಲ ಸುಖವಲ್ಲ ಎಂಬ ನಮ್ಮ ಚಿಂತನೆ ಬದಲಾಯಿಸಬೇಕಾಗಿದೆ. ಅಲ್ವೇ?


Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...