Wednesday, December 3, 2014

ಸಂತ ಜೋಸೆಫದ ನನ್ನ ನೆನಪುಗಳು.....!!!

           ಹಕ್ಕಿಗಳ ಚಿಲಿಪಿಲಿ ಕೇಳಿತು, ಬೆಳಕು ಹರಿಯಿತು, ಅಪ್ಪ-ಅಮ್ಮ ಅವರ ನಿತ್ಯ ಕರ್ಮಕ್ಕೆ ಹೊರಟರೆ, ಕುಳಿತು ಕಲಿಯುವ ಅಸ್ಥಾನಕ್ಕೆ ನಮ್ಮೀ ಪಯಣ ಸಾಗುತಿತ್ತು. ಹೊತ್ತಿಗೆ ಮತ್ತೆರಿದಂತೆ ಮಕರಂದ ಹೀರಲು ಬರುವ ಬಣ್ಣ ಬಣ್ಣದ ದುಂಬಿಗಳಂತೆ ನಗು ಮೊಗದಿಂದ ವಿದ್ಯಾ ವೃಂದಾವನಕ್ಕೆ ಮುತ್ತಿತು. ಸಮಯ 9:00 ಕರೆಗಂಟೆ ಮೊಳಗಿತು ಎಲ್ಲರೂ ತಮ್ಮ ಸ್ವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಕುಳಿತರೆ ಪ್ರೌಢತೆಯಿಂದ ಬಳಿತು ಪಕ್ವತೆಯೆಡೆಗೆ ಸಾಗುವ ಯೋಗಿಯಂತೆ ದಿಟ್ಟಿಸುತಿದ್ದಂತೆ ತುಳುನಾಡಿನ ಹೆಮ್ಮೆಯ ಹಿಮ್ಮೇಳದೊಂದಿಗೆ ಚೌಕಿಯಿಂದ ಒಂದೊಂದೇ ವೇಷಗಳ ರಂಗಪ್ರವೇಶ,
ಸಂತ ಜೋಸೆಪರ ತಾಂತ್ರಿಕ ಮಹಾ ವಿದ್ಯಾಲಯ ವಾಮಂಜೂರು ಮಂಗಳೂರು
St.Joseph Engineering College Vamanjoor Mangaluru.. 

 ಒಂದಷ್ಟು ಕಲರವವನ್ನುಂಟು ಮಾಡುವ ಮನಸ್ಸುಗಳು, ಪ್ರೇಕ್ಷಕರ ಕಡೆಯಿಂದ ಗದ್ದಲ ಅಲಿಖಿತ  ಯ ಆಜ್ಞೆ “BOSS, If you speak, I will cut your attendance, It’s sure..then I will teach you next year”  ಮತ್ತೆ ರಂಗದಲ್ಲಿ ಅತ್ತಿಂದಿತ್ತ ಓಡಾಟ ಇದು ಶ್ರೀರಂಗಭಟ್ಟರಾದರೆ, ಗಂಭೀರ ಹೆಜ್ಜೆ ನಗುಮೊಗದ ಪ್ರಾಂಶುಪಾಲರ  Design, ಹೌದು ಪಾಠ Design ಅದುದರಿಂದ ಕಿರು ಮೀಸೆ, ಗಡ್ಡಗಳಿಗೂ ಸ್ವಲ್ಪ Design ಮಾಡಿದರೆ, ಅವರನ್ನೆಲ್ಲ ಎದುರಿಗೆ ಕರೆದು ““Students should smart and well dressed, But how these guys look like…?”  ಪ್ರೇಕ್ಷಕರ ಕಡೆಯಿಂದ“Terrorists”ಎಂಬ ಧ್ವನಿಯೊಂದಿಗೆ ಮುಕ್ತಾಯ. ಕೆಲವೊಮ್ಮೆ ಪೂರ್ವದ ಗುರುಕುಲ ಪದ್ಧತಿಯು ಸವಿಯು ಮಾತುಬಲ್ಲವರಿಗೆ ಪ್ರಾಂಶುಪಾಲರ ತರಗತಿಯಲ್ಲಿ ಆಗುತ್ತಿದ್ದದ್ದು ಮಾತ್ರ ವಿಶೇಷ. ರಾಗ ತಾಳಬದ್ಧತೆಯೊಂದಿಗೆ ಪ್ರೋ. ಗಣಪತಿ ಭಟ್ ಅದು ಪಾಠ Vibration ಎಲ್ಲವೂ Vibrate, Pin drop silence ಅಂತಹ ಪಾಠ ಅಂತಹ ಮಾತು. ಮುಂದಿನದು Management, ತರಗತಿ Manage, ಆಗದಿದ್ದರೂ ಚರ್ಚೆ, ಕ್ವಿಜ್‍ಗಳಿಂದ Chaco P J Sirಡಿ ಮ್ಯಾನೆಜ್ ಮಾಡುತ್ತಿದ್ದದು ಮಾತ್ರ ನಿಜ. ಮತ್ತೆ ಯಕ್ಷಾಂಗಣದಲ್ಲಿ ಗದ್ಧಲ ಅರ್ಥಗಾರಿಕೆ ಮುಗಿಯುವುದರೊಳಗೆ ಸುಧೀರ್ ಸರ್‍ನ ಆಗಮನ ಸಣ್ಣ ಪ್ರತಿರೋಧನದ ಧ್ವನಿಗಳು ಕೇಳಿದರೆ ಶುರು ನಾದಸ್ವರ, ನುಡಿಮುತ್ತು, ಲೋಕವಿಚಾರ , ಜಾಣರಿಗೆ ಮಾತಿನ ಚಾಟಿಯೇಟಿನೊಂದಿಗೆ ಪಾಠ. ಹಿಂದಿನಿಂದ ನವಿಲು , ಸಿಂಹಗಳ ಭೋರ್ಗರೆತದ ಧ್ವನಿ, ರುಡಾಲ್ಫ್ ಸರ್‍ನ ನಗುವಿನಿಂದ ಆರಂಭವಾದ ಪಾಠ ಗಂಭೀರ ವದನದೆಡೆಗೆ ಒಂದಿಬ್ಬರು ಪ್ರೇಕ್ಷಕರಿಗೆ ಸಜೆ , ಜೈಲಿನೊಳಗೆ ಪ್ರಾಮಾಣ ಕರು ಬಂಧಿ, ಸಜೆಗೊಳಗಾದವರು ಹೊರನಡೆದು ಕಾಫಿ ಕೆಫೆಯಲ್ಲೋ, All is well ನಲ್ಲೋ , ಕಾಫಿಯ ಹಬೆ ಊದುತಿರುವರು. Raju Sir, Rolvin Sir, Anil Sir, Prashanth Sir, Pruthvi Sir...... ...... 
೨೦೦೯-೨೦೧೩ ಮೆಕ್ಯಾನಿಕಲ್ ಗೆಳೆಯರು, ಸ್ಪೋರ್ಟ್ಸ್ ದಿನಾಚರಣೆಯಂದು. 

           ಹೀಗೆ ಒಬ್ಬರ ಹಿಂದೆ ಮತ್ತೊಬ್ಬರು ಪೈಪೋಟಿಗಿಳಿದು ಬೇರೆ ಬೇರೆ ಭೂಷಣಗಳಿಂದ ಸಾಲು ಸಾಲು ಪ್ರವಚನ, ತರಗತಿಯಲ್ಲಿ ಕೆಲವು ರಾಷ್ಟ್ರಪಿತನ ಶಿಷ್ಯರಾದರೆ, ಮತ್ತೆ ಹಲವಾರು ಭೂಗತ ಜಗತ್ತಿನ ಸಹೋದರರು “ವಿಕಾಸ” “ವಿಕ್ರಮ”ಗಳು ತಮ್ಮ ಭಯಂಕರತೆಯಿಂದ ರಂಗದಲ್ಲಿ ಕರಿಹಲಗೆಯ ಮೇಲೆ ರೇಖೆಗಳ ಚಿತ್ತಾರ ಚಿತ್ರ ಬಿಡಿಸುತ್ತಿದ್ದ ಗೆಳೆಯನಿಗೆ ಸೈತಾನನಿಗೆ ಕಲ್ಲು ಹೊಡೆಯುವಂತೆ ಚಾಕ್, ಬರೆಯದ ಪೆನ್, ಯಾರದೋ ಪೆನ್ಸಿಲ್ ಗಳ ಸುರಿಮಳೆ. ಬಿಡುವಿನಲ್ಲಿ, ಕಡಲೆಕಾಯಿ ವಿರಾಮದಲ್ಲಿ ಪೇಪರ್ ಚೆಂಡಿನ ಕ್ರಿಕೆಟ್, ಸುಜೀತ್‍ನ ಟೇಬಲ್ ಟೆನಿಸ್, ಬಲೂನಿನ ರಾಕೆಟ್, CET , GATE  ಪರೀಕ್ಷೆಗಳ ಮರುದಿನ ಡೆಸ್ಕ್‍ಗೆ ಅಂಟಿಸಿದ್ದ ಕ್ರಮಸಂಖ್ಯೆ ಗೆಳೆಯನ ಉದ್ದ ಬಾಲ ಹೀಗೆ, ... ಹುಟ್ಟುಹಬ್ಬದ ದಿನದ ಆ ಮಾಲೆ ಪಟಾಕಿ ಸದ್ದಿನ ಗುದ್ದು ಮರುವರ್ಷದ ಆಚರಣೆಯವರೆಗೆ ಮರೆಯಾಲಾಗದು.. ಹೀಗೆ ಹಲವು, ಹಲವಾರು..... 
ವಿದ್ಯಾರ್ಥಿ ಗ್ರಂಥಾಲಯದ ಹತ್ತಿರ,. 

                ಒಂದು ಚಿಂತೆಯಂತು ಕಾಡುತಿದೆ Directorರ ಕಣ್ಣು ತಪ್ಪಿಸಿ ID card  ಹಾಕದೇ ಬಂದದ್ದು, ಗಡ್ಡ ಮೀಸೆ ಬಿಟ್ಟು ಪ್ರಾಂಶುಪಾಲರಿಗೆ ಬಗ್ಗಿ ಸಲಾಮ್ ಹೊಡೆದದ್ದು, HODಗೆ  Design Hand Book ಎಂದು ಅಂತಹುದೇ ಬೈಂಡ್ ಇರುವ ಬೇರೆ ಪುಸ್ತಕ ತೋರಿಸಿದ್ದು... ಇಂತಹ ರಸವತ್ತದ ಸನ್ನಿವೇಷಗಳನ್ನು ಬಹಳ ಮಿಸ್ ಮಾಡ್‍ಕೊತೆವೆಂತ.
                  ಮೆಕ್ಯಾನಿಕಲ್ ವಿದ್ಯಾರ್ಥಿಗಳ ಮೊದಲ ದಿನಚರಿಯೇ ಇಷ್ಟು..?? ಸುಮಾರು 60 ಮೆಟ್ಟಿಲು ಹತ್ತಿ ಮೂರನೇ ಮಹಡಿಯಲ್ಲಿ ಗಣಪನಿಗೆ ವಂದಿಸಿ ಪಕ್ಷಿನೋಟದ ಸಮೀಕ್ಷೆ , ಅಥವಾ ಸರ್ವೆ.. ಕೆಳಗಿನವರ ತಲೆ, ಜುಟ್ಟು, ಬ್ಯಾಗ್, ಅಂದ-ಚಂದ ಕಲರ್- ಕಲರ್ ಗಳ ಕಲರವ ಮಾತು,..??!! ಒಂದಂತು ನಿಜ ಪ್ರಕೃತಿಯ ಅಸಮತೋಲನದಂತೆ ತರಗತಿಯಲ್ಲಿ ಗಂಡು-ಹೆಣ್ಣುಗಳ ಅಣುಪಾತದಲ್ಲಿ ಬಾರಿ ಏರಿಳಿತ ಪ್ರತಿಶತ 97:3. ಬಂದ ಪ್ರತಿ ವೇಷಗಳು ತ್ಸುನಾಮಿಯಂತೆ ಬಂದು ಹೋದ ದಿನಗಳೇ ಹೆಚ್ಚು, ಪ್ರತಿದಿನವೂ ಅಲೆಗಳ ಅಬ್ಬರದ ಗದ್ದಲ ಕೇಳಿಸುತಿದ್ದದು ಮಾತ್ರ ಸತ್ಯ. ಇದರಿಂದಾಗಿ ಯಾಕೋ ಮೆಕ್ಯಾನಿಕಲ್ ಅಂದರೆ ಎಲ್ಲರಿಗೂ ಅಲರ್ಜಿ ಇರಬೇಕು ನನಗೂ ಉತ್ತರ ಸಿಕ್ಕಿಲ್ಲ ಉತ್ತರಿಸಲಾಗದ ಪ್ರಶ್ನೆಗಳ ಹಾಗೆ.....
೨೦೦೯-೨೦೧೩ ಮೆಕ್ಯಾನಿಕಲ್ ವಿಭಾಗ. 
2009-2013 Mechanical Batch

"ಸ್ವದೇಶಿ ಪೂಜ್ಯತೆ ರಾಜಾ, ವಿದ್ವಾನ್ ಸರ್ವತ್ರ ಪೂಜ್ತೆ" ಅಂದರೆ ರಾಜನಾದವನು ಕೇವಲ ತನ್ನ ರಾಜ್ಯದಲ್ಲಿ ಮಾತ್ರ ಪೂಜಿಸಲ್ಪಡುತ್ತಾನೆ ಆದರೆ ಯಾರಲ್ಲಿ ವಿದ್ಯೆ ಇದೆಯೋ ಅವನು ಎಲ್ಲೆಲ್ಲಿಯೂ ಪೂಜಿಸಲ್ಪಡುತ್ತಾನೆ ಎಂದು ಸುಭಾಷಿತ ವಿದ್ಯೆಯ ಮಹತ್ವವನ್ನು ಸಾರಿ ಹೇಳುತ್ತದೆ. ಸದ್ಗುಣ, ಸನ್ಮಾರ್ಗ, ಸತ್ ಚಾರಿತ್ರ್ಯದ ಸಂಸ್ಕಾರದೆಡೆಗೆ ಸಾಗುವ ರಾಜಮಾರ್ಗಕ್ಕೆ ಒಂದಷ್ಟು ಗೊಬ್ಬರ, ನೀರು ಸಿಕ್ಕರೆ ಗಿಡ ಮರವಾಗಿ ಉತ್ತಮವಾದ ಫಲ ಕೊಡುತ್ತದೆ, ಉಷ್ಣಕ್ಕೆ ಕಾದ ಕಬ್ಬಿಣ ಕರಗಿ ಬೇಕಾದ ಆಕಾರ ಪಡೆಯುತ್ತದೆ, ಅದೆಷ್ಟೋ ಉಳಿಪೆಟ್ಟು ತಿಂದ ಕಲ್ಲು ಸುಂದರ ಮೂರ್ತಿಯ ರೂಪ ಪಡೆಯುತ್ತದೆ. ತುಕ್ಕು ಹಿಡಿದ ನಮ್ಮ ಸ್ಮೃತಿಯೊಳಗೆ  ಜ್ಞಾನದ ಪ್ರಕಾಶನವ ತುಂಬಿದ ನಮ್ಮೆಲ್ಲ ಗುರುಗಳಿಗೆ ನಮಿಸಿ, ನಮ್ಮ ಕಾಲೇಜು ಕಛೇರಿಯಲ್ಲಿ ವಿದ್ಯಾರ್ಥಿಗಳು ಸಿಹಿಗೆ ಮುತ್ತಿಕೊಂಡ ಇರುವೆಗಳಂತೆ ರೋಹಿತ್ ಸರ್ ನ್ನು ಸುತ್ತಿಕೊಂಡು ಮೇಲಿಂದ ಮೇಲೆ ಪ್ರಶ್ನೆ ಬೀಸುತ್ತಾ  ಲಗುಬಗೆಯಿಂದ ಸದಾನಂದರಂತೆ ನಗು ಮೊಗ್ಗೆಯಿಂದಲೇ ಸೇವೆ ಮಾಡುವ ಸರ್ ನ್ನು ನೆನಪಿಸುತ್ತಾ, ಮುಂದಿನ ಸುತ್ತಾಟದ ಮೇಳಕ್ಕೆ ಸಿದ್ದತೆ ಭರ್ಜರಿಯಾಗಿ ಸಾಗಿದೆ, ಬೇಸರದಿಂದ ಆಕಸ್ಮಿಕವಾಗಿ ಅಪರಿಚಿತ ಮುಖ ಇಂದು ಪರಿಚಯವಾಗಿ ಸ್ನೇಹವಾಗಿ ಅನಿವಾರ್ಯಕ್ಕಾಗಿ ಬೇರ್ಪಡಬೇಕಾಗಿದೆ. ಎಲ್ಲರನ್ನೂ ಹರಸುತ್ತಾ, ಕಿರಿಯರಿಗೆ ಶುಭ ಹಾರೈಸುತ್ತಾ,..
"ಸಾಧಿಸುವ ಮನವೊಂದಿದ್ದರೆ, 
ದಾರಿ ತೋರ್ಪ ದೀಪವಿರುವುದಿಲ್ಲಿ,
ಬಾನೆತ್ತರದ ಕನಸ ಕಂಡು,
ಅಡಿಗಲ್ಲು ಮೇಲೈಸಿ ನಿಂತಿದೆ
ಮುಂದಡಿಯಿಟ್ಟ ತಾರೆಗಳಂತೆ ತಲೆಯೆತ್ತಿ ಸಲಾಂ... 
ST. JOSEPH ಗೆ ಅರ್ಪಿಸಿ
ಗುರುಗಳಿಗೆ ಸಮರ್ಪಿಸಿ..... ಮಂಗಳಂ ಶುಭ ಮಂಗಳಂ 
ಈ ವರ್ಷದ ಆಟಕ್ಕೆ ಇಲ್ಲಿಗೆ ವಿರಾಮ. . . .

- ಭರತೇಶ ಎ ಬಿ
ಅಂತಿಮ ಮೆಕ್ಯಾನಿಕಲ್

St. Joseph Engineering College Vamanjooru ಕೊಂಡಿಗೆ ಇಲ್ಲಿ ಚಿಟಿಕೆ ಹೊಡೆಯಿರಿ : http://www.sjec.ac.in/

2 comments:

Greetings from Mangalore: The Cradle of Banking Excellence

Hello from Mangalore! You've probably heard in quizzes that the cradle of banking is nothing but Dakshina Kannada or Mangaluru. Mangalor...